ಸುಳ್ಯಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಇಂಜಿನಿಯರ್ಸ್ ದಿನಾಚರಣೆ- ಸನ್ಮಾನ

0

ಸುಳ್ಯ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ವತಿಯಿಂದ ಇಂಜಿನಿಯರ್ಸ್ ದಿನಾಚರಣೆಯನ್ನು ಸುಳ್ಯದ ಅಂಬಟೆಡ್ಕದಲ್ಲಿರುವ ವರ್ತಕರ ಸಭಾಭವನದಲ್ಲಿ ಸೆ.17 ರಂದು ಆಚರಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಅಸೋಸಿಯೇಷನ್ ಅಧ್ಯಕ್ಷ ಇಂಜಿನಿಯರ್ ಶ್ಯಾಮ್ ಪ್ರಸಾದ್ ರವರು ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಪುತ್ತೂರು ಎಸಿಸಿಇ ಚೆಯರ್ಮೆನ್ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು.

ಪದ್ಮಶ್ರೀ ಪುರಸ್ಕೃತ ಇಂಜಿನಿಯರ್ ಗಿರೀಶ್ ಭಾರದ್ವಾಜ್, ಗೌರವಾಧ್ಯಕ್ಷ ಇಂಜಿನಿಯರ್ ಸುಮಿತ್ರ ಡಿ.ಎಂ, ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಇಂಜಿನಿಯರ್ ಡಾ. ಕಿಶೋರ್ ಕುಮಾರ್ ಬಿ.ಆರ್, ನಿಕಟ ಪೂರ್ವ ಅಧ್ಯಕ್ಷ ಇಂಜಿನಿಯರ್ ಪ್ರಸಾದ್ ಎಂ.ಎಸ್, ಕಾರ್ಯದರ್ಶಿ ಇಂಜಿನಿಯರ್ ನವನೀತ್ ರೈ,ಕೋಶಾಧಿಕಾರಿ ಇಂಜಿನಿಯರ್ ಜೋಮೋನ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪಿ.ಹೆಚ್.ಡಿ ಪುರಸ್ಕೃತ ಡಾ. ಕಿಶೋರ್ ಕುಮಾರ್ ಬಿ.ಆರ್ ರವರನ್ನು ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು.
ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಇಂಜಿನಿಯರ್ ಸುಧನ್ವ ಕೃಷ್ಣ ಪ್ರಾರ್ಥಿಸಿದರು. ನವನೀತ್ ರೈ ಸ್ವಾಗತಿಸಿದರು. ಇಂಜಿನಿಯರ್ ಕೃಷ್ಣ ರಾವ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂಜಿನಿಯರ್ ನಾಸೀರ್ ಅತಿಥಿಗಳ ಪರಿಚಯ ವಾಚಿಸಿದರು. ಇಂಜಿನಿಯರ್ ಶ್ರೀಮತಿ ಸುವ್ಯ ಸನ್ಮಾನಿತರ ಪರಿಚಯ ವಾಚಿಸಿದರು. ಇಂಜಿನಿಯರ್ ಸನತ್ ವಂದಿಸಿದರು.
ಇಂಜಿನಿಯರ್ ಗಿರೀಶ್ ನಾರ್ಕೋಡು ಕಾರ್ಯಕ್ರಮ ನಿರೂಪಿಸಿದರು. ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ಸಹ ಭೋಜನದ ವ್ಯವಸ್ಥೆ ಮಾಡಲಾಗಿತ್ತು.