ಕೇರ್ಪಡ : ನವರಾತ್ರಿ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ದ ಆಮಂತ್ರಣವನ್ನು ದೇವಸ್ಥಾನದ ಅರ್ಚಕ ಪ್ರಶಾಂತ್ ಪಾರ್ಲತಾಯರ ಪ್ರಾರ್ಥನೆ ಯೊಂದಿಗೆ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಬಿಡುಗಡೆಗೊಳಿಸಿದರು.

ವರ್ಷಪ್ರತಿ ನಡೆಯುವ ಉತ್ಸವದಂತೆ ಅ.2ರಿಂದ 12ರ ವರೆಗೆ ನಡೆಯಲಿರುವುದು ಎಂದು ಅಧ್ಯಕ್ಷರು ಹೇಳಿದರು.

ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರಾದ ವೆಂಕಪ್ಪ ಗೌಡ ಆಲಾಜೆ, ಯೋಗಾನಂದ ಉಲ್ಲೆಲಾಡಿ, ವಾರಿಜಕ್ಷಿ ವೆಂಕಟ್ರಮಣ ಗೌಡ, ಭಜನಾ ಮಂಡಳಿ ಅಧ್ಯಕ್ಷ ಸುಂದರ ಗೌಡ ಆರೆಂಬಿ, ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ಗುಣವತಿ ನಾವೂರು, ಎಡಮಂಗಲ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದಿವ್ಯಾ ಯೋಗಾನಂದ, ಕೆ.ಯಸ್ ಗೌಡ ವಿದ್ಯಾ ಸಂಸ್ಥೆಯ ಶಿಕ್ಸಕ್ಷಿ ಲಲಿತಾ ಮತ್ತು ವರುಣ್ ಕರಿಂಬಿಲ ಹಾಗೂ ಕೂಡುಕಟ್ಟ್ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.