ಐವರ್ನಾಡು : ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ತಾಲೂಕು ಘಟಸಮಿತಿ ಪದಾಧಿಕಾರಿಗಳ ಸಭೆ

0

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ವಿಕಾಸ ವಾಹಿನಿ ಸ್ವಸಹಾಯ ಸಂಘಗಳ ಸುಳ್ಯ ತಾಲೂಕು ಮಟ್ಟದ ಘಟ ಸಮಿತಿ ಪದಾಧಿಕಾರಿಗಳ ಸಭೆಯು ಸೆ.29 ರಂದು ಐವರ್ನಾಡು ಗ್ರಾಮ ವಿಕಾಸ ಸಭಾಭವನದಲ್ಲಿ ನಡೆಯಿತು.


ಸಭೆಯಲ್ಲಿ ಐದು ವಲಯಗಳಲ್ಲಿ ವಲಯ ಮಟ್ಟದ ಪದಾಧಿಕಾರಿಗಳು ಹಾಗೂ ತಾಲೂಕು ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.


ಅಧ್ಯಕ್ಷರಾಗಿ ಸುಹಾಸ್ ಅಲೆಕ್ಕಾಡಿ, ಕಾರ್ಯದರ್ಶಿ ಸಂದೀಪ್ ಸುಳ್ಯ, ಉಪಾಧ್ಯಕ್ಷರಾಗಿ ದೇವಿ ಪ್ರಸಾದ್ ಐವರ್ನಾಡು, ಜೊತೆ ಕಾರ್ಯದರ್ಶಿಯಾಗಿ ಜಾನಕಿ ಆಲೆಟ್ಟಿ, ಸಂಘಟನಾ ಕಾರ್ಯದರ್ಶಿಯಾಗಿ ಜಯರಾಮ ಗುತ್ತಿಗಾರು, ಸಹ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಜಾಲ್ಸೂರು ರವರನ್ನು ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.


ವೇದಿಕೆಯಲ್ಲಿ ಸಭಾಧ್ಯಕ್ಷರಾಗಿ ಸುಹಾಸ್ ಅಲೆಕ್ಕಾಡಿ, ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ , ಸುಳ್ಯತಾಲೂಕು ಮೇಲ್ವಿಚಾರಕಿ ಶ್ರೀಮತಿ ಗೀತಾ ನೆಟ್ಟಾರು, ಜೊತೆ ಕಾರ್ಯದರ್ಶಿ ಜಾನಕಿ ಆಲೆಟ್ಟಿ ,ಸಂಘಟನಾ ಕಾರ್ಯದರ್ಶಿ ಜಯರಾಮ ಗುತ್ತಿಗಾರು,ಸುಳ್ಯ ಸಹಕಾರಿ ವ್ಯವಸ್ಥಾಪಕರಾದ ಸಂತೋಷ್ ಉಪಸ್ಥಿತರಿದ್ದರು.


ಗುತ್ತಿಗಾರು ಸಂಯೋಜಕಿ ಶ್ರೀಮತಿ ಸವಿತಾ ಕಾರ್ಯಕ್ರಮ ನಿರೂಪಿಸಿ, ಸುಳ್ಯ ಸಂಯೋಜಕಿ ಶ್ರೀಮತಿ ರೇವತಿ ಸ್ವಾಗತಿಸಿದರು.


ಬೆಳ್ಳಾರೆ ಸಂಯೋಜಕಿ ಶ್ರೀಮತಿ ಶೀಭಾರೈ ವರದಿ ವಾಚಿಸಿದರು. ಸೋಣಂಗೇರಿ ಸಂಯೋಜಕಿ ವಂದಿಸಿದರು. ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯಗೊಂಡಿತು.