ಆಲೆಟ್ಟಿ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ದೇವಸ್ಥಾನದ ಶಾಶ್ವತ ಚಪ್ಪರ ನಿರ್ಮಾಣಕ್ಕೆ ದೇಣಿಗೆ

0

ಆಲೆಟ್ಟಿಯ ಗುಂಡ್ಯ ಜನನಿ ಫ್ರೆಂಡ್ಸ್ ಕ್ಲಬ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ಆಲೆಟ್ಟಿಯಲ್ಲಿ ಜರುಗಿದ ಮೊಸರು ಕುಡಿಕೆ ಉತ್ಸವದಲ್ಲಿ ಉಳಿಕೆಯಾದ ಮೊತ್ತವನ್ನು ಆಲೆಟ್ಟಿ ಸದಾಶಿವ ದೇವಸ್ಥಾನದ ಶಾಶ್ವತ ಚಪ್ಪರ ನಿರ್ಮಾಣಕ್ಕೆ ದೇಣಿಗೆಯಾಗಿ ನೀಡಲಾಯಿತು.

ಕಾರ್ಯಕ್ರಮದ ಒಟ್ಟು ಅಯ ವ್ಯಯದ ಲೆಕ್ಕ ಪತ್ರ ಮಂಡನೆಯಾಗಿ ಉಳಿಕೆ ಹಣ ರೂ.15,088/- ನ್ನು ದೇವಸ್ಥಾನದ ಚಪ್ಪರ ನಿರ್ಮಾಣ ಸಮಿತಿ ಯವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಉದಯ ಕುಡೆಕಲ್ಲು, ಜನನಿ ಕ್ಲಬ್ ಅಧ್ಯಕ್ಷ ತೀರ್ಥರಾಮ ವಾಲ್ತಾಜೆ, ಗೌರವಾಧ್ಯಕ್ಷ ಲತೀಶ್ ಗುಂಡ್ಯ, ನಿತಿನ್ ಗುಂಡ್ಯ, ಸತೀಶ್ ಕುಲಾಲ್ ಆಲೆಟ್ಟಿ, ಸುನಿಲ್ ಗುಂಡ್ಯ, ಅಜಿತ್ ಗುಂಡ್ಯ, ರೋಹಿತ್ ಯಾದವ್ ಕುಡೆಕಲ್ಲು, ವಿನೋದ್ ಕುಡೆಕಲ್ಲು, ರಾಜೇಶ್ ಕುಡೆಕಲ್ಲು, ವಿಷ್ಣು ಪ್ರಸಾದ್ ಗುಂಡ್ಯ, ಚಿತ್ರವೇಲು ಮತ್ತಿತರರು ಉಪಸ್ಥಿತರಿದ್ದರು.