ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ತೆನೆಕಟ್ಟುವ, ಆಯುಧ ಪೂಜಾ ಕಾರ್ಯಕ್ರಮ

0

ಹರಿಹರ ಪಳ್ಳತ್ತಡ್ಕದ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಅ.10 ರಂದು ಬೆಳಿಗ್ಗೆ ತೆನೆಕಟ್ಟುವ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಹೊಸ್ತಾರೋಗಣೆ ಕಾರ್ಯಕ್ರಮ ನೆರವೇರಿತು.

ದೇವಲದ ಪ್ರಧಾನ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ಬೆಳಗ್ಗೆ ತೆನೆಗೆ ಪೂಜೆ ನೆರವೇರಿಸಿ ಭಕ್ತರಿಗೆ ತೆನೆ ವಿತರಿಸಿದರು. ಮಧ್ಯಾಹ್ನ ನೂರಾರು ಭಕ್ತರಿಂದ ನವಾನ್ನಭೋಜನ ನೆರವೇರಿತು.


ಪೂರ್ವಾಹ್ನ ವಾಹನ ಪೂಜೆ ನೆರವೇರಿದ್ದು, ಸಂಜೆ ವಾಹನ ಪೂಜೆ ನಡೆದು ರಾತ್ರಿ ದೇವಳದಲ್ಲಿ ನವರಾತ್ರಿ ಪ್ರಯುಕ್ತ ದುರ್ಗಾಪೂಜೆ ನೆರವೇರಿತು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್ ಕೂಜುಗೋಡು, ಸದಸ್ಯರು, ಅಭಿವೃದ್ಧಿ ಸಮಿತಿ ಸದಸ್ಯರು ಮತ್ತಿತರರು ಭಾಗವಹಿಸಿದ್ದರು.