ಸುಳ್ಯದ ಶ್ರೀ ಶಾರದಾಂಬ ದಸರಾ -2024

0

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್, ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ, ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಹಾಗೂ ಶ್ರೀ ಶಾರದಾಂಬ ಉತ್ಸವ ಸಮಿತಿಯ ವತಿಯಿಂದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಜರುಗುತ್ತಿರುವ ಶ್ರೀ ಶಾರದಾಂಬ ಉತ್ಸವ ಸುಳ್ಯ ದಸರಾ -2024ರ ಸಾಂಸ್ಕೃತಿಕ ಕಾರ್ಯಕ್ರಮವು ಅದ್ಧೂರಿ ಸಂಗೀತ ಸೌರಭ ರಸಮಂಜರಿಯ ಮೂಲಕ ಅ.16ರಂದು ಮುಕ್ತಾಯಗೊಂಡಿತು.

ಸಂಗೀತ ನಿರ್ದೇಶಕ ಗುರುಕಿರಣ್ ಅವರ ನೇತೃತ್ವದಲ್ಲಿ ಆರಂಭಗೊಂಡ ಸಂಗೀತ ರಸಮಂಜರಿಯಲ್ಲಿ ಚಲನಚಿತ್ರ ಹಿನ್ನೆಲೆ ಗಾಯಕ ಸರಿಗಮಪ ಸೀಸನ್20ರ ವಿಜೇತ ದರ್ಶನ್ ನಾರಾಯಣ್ ನೇತೃತ್ವದಲ್ಲಿ ಸ್ಟಾರ್ ಸಿಂಗರ್ ಗಳಾದ ಅಮಿಶ್ ಕುಮಾರ್, ಶಿವಾನಿ ನವಿನ್, ಐಶ್ವರ್ಯ ರಂಗರಾಜನ್, ಅರ್ಫಾಜ್ ಉಲ್ಲಾಳ್ ಸೇರಿದಂತೆ ಮೊದಲಾದ ಗಾಯಕರುಗಳನ್ನೊಳಗೊಂಡ ತಂಡದಿಂದ ಸಂಗೀತ ಸೌರಭ ಸಂಗೀತ ರಸಮಂಜರಿ ಜರುಗಿತು.

ಕಾರ್ಯಕ್ರಮ ವೀಕ್ಷಿಸಲು ನಿರೀಕ್ಷೆಗೂ ಮೀರಿ ಜನರು ಆಗಮಿಸಿದ್ದರು. ಸಭಾಂಗಣದಲ್ಲಿ ಹಾಕಲಾದ ಆಸನಗಳೆಲ್ಲ ಸಂಪೂರ್ಣ ಭರ್ತಿಯಾಗಿ ಸಭಾಂಗಣದ ಎರಡೂ ಬದಿ ಇಕ್ಕೆಲಗಳಲ್ಲಿ ನಿಂತು ಕಾರ್ಯಕ್ರಮ ವೀಕ್ಷಿಸಿದ್ದರು.