ನ್ಯಾಯಾಲಯದ ತೀರ್ಪು ಸಮಾಜಕ್ಕೆ ಒಳ್ಳೆಯ ಸಂದೇಶ

0

ಹತ್ಯೆಗೀಡಾದ ಬಾಲಚಂದ್ರ ಕಳಗಿ ಪತ್ನಿ ರಮಾದೇವಿ ಪ್ರತಿಕ್ರಿಯೆ

ಕೊಡಗು ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಬಾಲಚಂದ್ರ ಕಳಗಿಯವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ನ್ಯಾಯಾಲಯ ಅಪರಾಧಿಗಳೆಂದು ತೀರ್ಪು ನೀಡಿರುವ ಹರಿಪ್ರಸಾದ್ ಮತ್ತು ಜಯನ್‌ಗೆ ಇಂದು ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆಯ ತೀರ್ಪು ನೀಡಿದೆ.

ಹತ್ಯೆಗೀಡಾದ ಬಾಲಚಂದ್ರ ಕಳಗಿ ಪತ್ನಿ , ಕೊಡಗು ಸಂಪಾಜೆ ಗ್ರಾ.ಪಂ.ಅಧ್ಯಕ್ಷೆ ರಮಾದೇವಿ ಕಳಗಿ ತೀರ್ಪಿನ ಕುರಿತು ಸಯದ್ದಿಗೆ ಪ್ರತಿಕ್ರಿಯಿಸಿದ್ದು, ನ್ಯಾಯಾಲಯದ ತೀರ್ಪು ಸಮಾಜಕ್ಕೆ ಒಳ್ಳೆಯ ಸಂದೇಶ ತಂದಿದೆ ಎಂದು ಹೇಳಿದ್ದಾರೆ.

ಬಾಲಚಂದ್ರರ ಚಿಕ್ಕಪ್ಪಂದಿರಾದ ರಾಜಾರಾಮ ಕಳಗಿ ಮತ್ತು ವಿಠಲ ಕಳಗಿ ಅವರು ಪ್ರತಿಕ್ರಿಯಿಸಿ ಇದು ಆರೋಪಿಗಳಿಗೆ ದೇವರು ಕೊಟ್ಟ ಶಿಕ್ಷೆ , ತಪ್ಪು ಮಾಡಿದವರು ಒಂದಲ್ಲ ಒಂದು ದಿನ ಶಿಕ್ಷೆಯನ್ನು ಅನುಭವಿಸಲೇಬೇಕು” ಎಂದು ಪ್ರತಿಕ್ರಿಯೆ ನೀಡಿದರು.