ಕೊಡಗು ಸಂಪಾಜೆ: ಬಾಲಚಂದ್ರ ಕಳಗಿ ಹತ್ಯೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದ ನ್ಯಾಯಾಲಯ

0

ಸಂಪಾಜೆಯಲ್ಲಿ ಬಾಲಚಂದ್ರ ಕಳಗಿ ಅಭಿಮಾನಿಗಳಿಂದ ಸಂಭ್ರಮಾಚರಣೆ

ಕೊಡಗು ಸಂಪಾಜೆಯ ಬಿಜೆಪಿ ಮುಖಂಡರಾಗಿದ್ದ ದಿ. ಬಾಲಚಂದ್ರ ಕಳಗಿ ಹತ್ಯೆ ಆರೋಪಿಗಳಿಗೆ ನ್ಯಾಯಾಲಯವು ಅ.19ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಬಾಲಚಂದ್ರ ಕಳಗಿ ಅಭಿಮಾನಿಗಳು ಸೇರಿ ಸಂಪಾಜೆಯಲ್ಲಿ ಸಂಭ್ರಮಾಚರಣೆ ನಡೆಸಿದರು.

ಈ ಸಂದರ್ಭದಲ್ಲಿ ಸಂಪಾಜೆ ಪಯಸ್ವಿನಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ. ಅನಂತ ಊರುಬೈಲು, ಹೊನ್ನಪ್ಪ ಕಾಸ್ಪಾಡಿ, ಸುಂದರ ಚಿಟ್ಟೆಕ್ಕಾನ, ಪುರುಷೋತ್ತಮ ಗುತ್ತು, ಪ್ರಕಾಶ್ ಕಟ್ಟಕೋಡಿ, ನಾರಾಯಣ ಕುಕ್ಕೇಟಿ, ಪುಷ್ಪಾವತಿ ಕೊಯನಾಡು, ಕೊರಗಪ್ಪ ಸಂಪಾಜೆ, ಕುಮಾರ ಚೆದ್ಕಾರ್, ವಿಮಲ ಚಡಾವು, ಉದಯ ಹನಿಯಡ್ಕ, ಬಬಿನ್ ಚಡಾವು, ತಿಲಕ್ ರಾಜ್ ಕಳಗಿ ಸೇರಿದಂತೆ ಬಾಲಚಂದ್ರ ಕಳಗಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.