ಅಡ್ಕಾರ್ ಮಹೋತ್ಸವ- ದಸರಾ ದೀಪಾವಳಿ ಧಮಾಕ : ವಾರದ ವಿಜೇತರ ಆಯ್ಕೆ

0


ಅಡ್ಕಾರ್ ಇಲೆಕ್ಟ್ರಾನಿಕ್ಸ್ ನ ದಸರಾ ದೀಪಾವಳಿ ಧಮಾಕದ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ವಾರದ ವಿಜೇತರ ಆಯ್ಕೆ ಅ.19ರಂದು ನಡೆಯಿತು.
ಹಿರಿಯ ಉದ್ಯಮಿ ವಿನೋಬನಗರ ಸುಧಾಕರ ಕಾಮತ್, ಸುದ್ದಿ ಬಿಡುಗಡೆ ಪತ್ರಿಕೆಯ ಕಚೇರಿ ವ್ಯವಸ್ಥಾಪಕ ಯಶ್ವಿತ್ ಕಾಳಂಮನೆ, ಜಾಹೀರಾತು ವಿಭಾಗ ಮುಖ್ಯಸ್ಥ ರಮೇಶ್ ನೀರಬಿದಿರೆ ಡ್ರಾ ನೆರವೇರಿಸಿದರು.


ಪ್ರಥಮ ಬಹುಮಾನವನ್ನು ಮಾಧವ ಭಟ್ ಅಂಜಿಕ್ಕಾರ್,ದ್ವಿತೀಯ – ದಿನೇಶ್ ಮುಳ್ಯ, ತೃತೀಯ-ಹಿಮ ಆರ್.ಬಿ.ಸುಳ್ಯ ಪಡೆದುಕೊಂಡರು.
ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.