ಅರೆಭಾಷೆ ಹೃದಯದ ಭಾಷೆ : ಕೆ.ಆರ್.ಗಂಗಾಧರ್

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಮತ್ತು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಆಶ್ರಯದಲ್ಲಿ ಅರೆಭಾಷೆ ಸಂಘದ ಉದ್ಘಾಟನೆ ಮತ್ತು ಕಾಲೇಜು ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮ ಜೂ. 28 ರಂದು ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿಯವರು ವಹಿಸಿ ಅರೆಬಾಷೆ ತ್ರೈಮಾಸಿಕ ಪತ್ರಿಕೆ ಹಿಂಗಾರದಲ್ಲಿ ವಿದ್ಯಾರ್ಥಿ ಸಾಹಿತ್ಯಕ್ಕಾಗಿಯೇ ಪುಟಗಳನ್ನು ಮೀಸಲಿಟ್ಟಿದ್ದೇವೆ. ವಿದ್ಯಾರ್ಥಿಗಳು ಬರವಣಿಗೆಯಲ್ಲಿ ತೊಡಗಿಕೊಳ್ಳಬೇಕು., ಅಲ್ಲದೇ ಮುಂದಿನ ಪೀಳಿಗೆಗೆ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಿ ಬೆಳೆಸುವ ಮಹತ್ತರ ಕಾರ್ಯ ವಿದ್ಯಾರ್ಥಿಗಳ ಮೇಲಿದೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಿಶ್ರಾಂತ ಪ್ರಾಂಶುಪಾಲ ಕೆ.ಆರ್ ಗಂಗಾಧರ ನೆರವೇರಿಸಿ, ಭಾಷೆ ಉಳಿಸಿ ಬೆಳೆಸುವ ಅಗತ್ಯತೆಯನ್ನು ಹೇಳುತ್ತಾ ಅರೆಭಾಷೆ ಹೃದಯದ ಭಾಷೆ. ಈ ಭಾಷೆಯನ್ನು ಮಾತನಾಡಲು ಯಾವುದೇ ಮುಜುಗರ ಬೇಡ. ಹಲವಾರು ಅಚ್ಚ ಅರೆಭಾಷೆ ಪದ ಬಳಕೆಯ ಅರ್ಥ ಮತ್ತು ಇತರ ಯಾವ ಭಾಷೆಗಳಲ್ಲೂ ಇಲ್ಲದ ಶಬ್ದ ಭಂಡಾರದ ಸಿರಿವಂತಿಕೆಯನ್ನು ಕೊಂಡಾಡಿದರು.











ಶಾಲಾ ಮಕ್ಕಳಲ್ಲಿ ಅರೆಭಾಷೆ ಸಾಹಿತ್ಯವನ್ನು ಬೆಳೆಸಲು ಬೇಕಾದ ಸೂಕ್ಷ್ಮತೆಯ ಬಗ್ಗೆ ವಿವರಣೆ ನೀಡುತ್ತಾ ಉಪನ್ಯಾಸ ನೀಡಿದ ಸಾಹಿತಿ ಹಾಗೂ ಕಲಾವಿದ ಭವಾನಿಶಂಕರ ಅಡ್ತಲೆ ಯವರು ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ತಿಳಿಸಿ ಮನೆಯಲ್ಲಿನ ಹಿರಿಯರೇ ಅವರ ಜೀವನ ಸಾರವೇ ಸಾಹಿತ್ಯಕ್ಕೆ ಪ್ರೇರಣೆ ಎಂದರು.
ಮುಖ್ಯ ಅಥಿತಿಯಾಗಿ ವೇದಿಕೆಯಲ್ಲಿದ್ದ ಕಾಲೇಜಿನ ಪ್ರಾoಶುಪಾಲ ಎಸ್ ರಮೇಶ್ ರವರು ಶುಭಾಶಯಗಳನ್ನು ನೀಡಿದರು.
ಸಂಘದ ಶಿಕ್ಷಕ ಸಂಯೋಜಕ ಕಿಶೋರ್ ಕುಮಾರ್ ಕಿರ್ಲಾಯ ರವರು ಪ್ರೇರಣಾಧಾಯಕ ಮಾತುಗಳೊಂದಿಗೆ ಶುಭ ಹಾರೈಸಿದರು.
ಅರೆಭಾಷೆ ಅಕಾಡಮಿಯ ಸದಸ್ಯರುಗಳಾದ ಚಂದ್ರಶೇಖರ್ ಪೇರಾಲ್, ತೇಜಕುಮಾರ್ ಕುಡೇಕಲ್, ಡಾ. ಜ್ಞಾನೇಶ್ ಎನ್ ಎ ವೇದಿಕೆಯಲ್ಲಿ ಉಪಸ್ಥಿತರಿದ್ದು ನೂತನ ಸಂಘಕ್ಕೆ ಶುಭ ಹಾರೈಸಿದರು.
ಅಕಾಡಮಿಯ ಸದಸ್ಯ ಸಂಚಾಲಕ ಲೋಕೇಶ್ ಊರುಬೈಲ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿಗಳಾದ ಜಯಂತ ಡಿ ಎಸ್, ಮೌಲ್ಯ ಎಂ ವಿ, ಮನೀಶ್ ಮತ್ತು ಶೋಭಿತ ಕೆ. ಕೆ. ಪ್ರಾರ್ಥನೆ ಹಾಡಿದರು. ಸಂಘದ ಉಪಾಧ್ಯಕ್ಷ ರಾದ ಪವನ್ ಎಂ ಎ ಸ್ವಾಗತಿಸಿ, ನಿರ್ದೇಶಕರಾದ ಶ್ರವಣ್ ಪಿ ಡಿ ವಂದನಾರ್ಪಣೆ ಮಾಡಿದರು. ಸಂಫದ ನೂತನ ಅಧ್ಯಕ್ಷರಾದ ಗ್ರೀಷ್ಮ ಕೆ.ಎಸ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ನೆಹರೂ ಮೆಮೋರಿಯಲ್ ಪ.ಪೂ.ಕಾಲೇಜಿನ ಅಧ್ಯಾಪಕ,ಉಪನ್ಯಾಸ ವೃಂದ ಹಾಗು ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.










