ನರೇಂದ್ರ ಮೋದಿ ಅವರ ಕೇಂದ್ರ ಸರಕಾರ ಯಶಸ್ವಿಯಾಗಿ 11 ವರ್ಷಗಳನ್ನು ಪೂರೈಸಿದ ಸಂದರ್ಭ ದಲ್ಲಿ ಸಂಕಲ್ಪದಿಂದ ಸಾಧನೆಯಡೆಗೆ ಕಾರ್ಯಕ್ರಮದ ಅಂಗವಾಗಿ ವಿಶ್ವ ಪರಿಸರ ದಿನಾಚರಣೆಯನ್ನು ಸಂಪಾಜೆ ಶಕ್ತಿಕೇಂದ್ರದಲ್ಲಿ ನಡೆಸಲಾಯಿತು.
















ಬೂತ್ ಅಧ್ಯಕ್ಷರಾದ ವರದರಾಜ್ ಸಂಕೇಶ್ ಅವರ ಜಮೀನಿನಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಂಕಲ್ಪದಿಂದ ಸಾಧನೆ ಎಡೆಗೆ ಕಾರ್ಯಕ್ರಮದ ಜಿಲ್ಲಾ ಸಂಚಾಲಕರಾದ ಹರೀಶ್ ಕಂಜಿಪಿಲಿ, ಅರಂತೋಡು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸಂತೋಷ್ ಕುತ್ತ ಮೊಟ್ಟೆ,ಗುತ್ತಿಗಾರು ಮಾಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯಕ್, ಮಹಿಳಾ ಮೋರ್ಚಾದ ಕಾರ್ಯದರ್ಶಿ ಮತ್ತು ಮಹಾಶಕ್ತಿ ಕೇಂದ್ರದ ಮಹಿಳಾ ಪ್ರಮುಖ್ ಭಾರತಿ ಪುರುಷೋತ್ತಮ್. ಶಕ್ತಿಕೇಂದ್ರದ ಅಧ್ಯಕ್ಷರಾದ ನಾಗೇಶ್, SC ಮೋರ್ಚಾದ ಅಧ್ಯಕ್ಷರಾದ ವಿಜಯ ಆಲಡ್ಕ ಗೌರವಾನ್ವಿತ ಹಿರಿಯ ಕಾರ್ಯಕರ್ತ ಎಸ್ ಪಿ ಲೋಕನಾಥ್, ಪಂಚಾಯತ್ ಸದಸ್ಯರಾದ ರಜನೀ ಶರತ್, ಆರಂತೋಡು ಪಂಚಾಯತ್ ಅಧ್ಯಕ್ಷರಾದ ಕೇಶವ ಅಡ್ತಲೆ, ಸಂಪಾಜೆ ಬೂತುಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಕಾರ್ಯಕರ್ತರು, ಮತ್ತು ಅನನ್ಯ ಉಪಸ್ಥಿತರಿದ್ದರು.











