ಎಂಟನೇ ತರಗತಿಯ ವಿದ್ಯಾರ್ಥಿಗಳ ಪೋಷಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಶ್ರಮದಾನದಲ್ಲಿ ಭಾಗಿ

ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಇದರ ಅಮೃತ ಮಹೋತ್ಸವದ ಅಂಗವಾಗಿ ಶಾಲಾ ಪರಿಸರದ ಸ್ವಚ್ಛತಾ ಅಭಿಯಾನ ಕಾರ್ಯಕ್ರಮದ ಎರಡನೇ ವಾರದ ಕಾರ್ಯಕ್ರಮ ಆ.3 ರಂದು ನಡೆಯಿತು.
ಶ್ರಮದಾನದಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿಗಳ ಪೋಷಕರು,ಶ್ರೀ ಒಡಿಯೂರು ಗ್ರಾಮ ಅಭಿವೃದ್ಧಿ ಸಂಘ ಸುಳ್ಯ ಇದರ ಪದಾಧಿಕಾರಿಗಳು ಮತ್ತು ಸದಸ್ಯರು,ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ತಂಡದ ಸದಸ್ಯರುಗಳು,ಶಾಲಾ ಹಳೆ ವಿದ್ಯಾರ್ಥಿ ಸಂಘದ ಸದಸ್ಯರು,ಮತ್ತು ಶಾಲೆಯ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
















ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಬಿ. ಸುಧಾಕರ್ ರೈ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರಕಾಶ್ ಮೂಡಿತ್ತಾಯ, ಎಸ್ ಡಿ ಎಂ ಸಿ ಅಧ್ಯಕ್ಷೆ ಮಂಜುಳಾ ಬಡಿಗೇರ್, ಉಪಾಧ್ಯಕ್ಷ ಹಸೈನಾರ್ ಜಯನಗರ, ಶ್ರಮದಾನ ಸಮಿತಿಯ ಸಂಚಾಲಕ ರಾಜೇಶ್ ಉಬರಡ್ಕ, ಎಸ್ ಡಿಎಂಸಿ ಸದಸ್ಯರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಯುವಕ ಮಂಡಳ ರಿ. ಉಬರಡ್ಕ ಮಿತ್ತೂರು, ವಿನಾಯಕ ಮಿತ್ರ ಬಳಗ ಅಮೈ ಮಡಿಯಾರ್, ಜೀವನ ಜ್ಯೋತಿ ಟ್ರಸ್ಟ್ ಉಬರಡ್ಕ ಸಂಘಟನೆಯ ಸದಸ್ಯರುಗಳು ಸಹಕರಿಸಿದರು.










