ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ ಅಳ್ಪೆ-ಚಿಂಗಾಣಿಗುಡ್ಡೆ ಪಂಜ ಇವುಗಳ ಜಂಟಿ ಆಶ್ರಯದಲ್ಲಿ.ಕೆಸರ್ ದ ಪರ್ಬ ಕ್ರೀಡಾ ಕೂಟ ಅಳ್ಪೆ ಕುದ್ಕುಳಿ ಹಿಮಕರ ಇವರ ಗದ್ದೆಯಲ್ಲಿ ಜರುಗಿತು.
ಸುಬ್ರಹ್ಮಣ್ಯ ಅನುಗ್ರಹ ಕನ್ ಸ್ಟ್ರಕ್ಷನ್ ಮಾಲಕ ಡಾ|ರೋ| ರವಿ ಕಕ್ಕೆಪದವು ಉದ್ಘಾಟಿಸಿ ಮಾತನಾಡಿ “ಇಲ್ಲಿನ ಯುವಕ ಯುವತಿ ಮಂಡಲಗಳು ಒಗ್ಗಟ್ಟಿನಿಂದ ವಿಶೇಷವಾಗಿ ಸಾಮಾಜಿಕ ಕಾರ್ಯಕ್ರಮಗಳೊಂದಿಗೆ ಗುರುತಿಸಿ ಕೊಂಡಿದೆ.
ಮರೆಯಾಗುತ್ತಿರುವ ಕೆಸರು ಗದ್ದೆ ಕ್ರೀಡೆಯನ್ನು ಮತ್ತೆ ಪರಿಚಯಿಸಿ ಬೆಳೆಸುವ ವಿಶೇಷ ಕಾರ್ಯ ಇಲ್ಲಿ ಆಗಿದೆ” ಎಂದು
ಶುಭಹಾರೈಸಿದರು.