ತಾ.ಪಂ.ನಲ್ಲಿ ಸಚಿವ ಎಸ್.ಅಂಗಾರರ ನೇತೃತ್ವದಲ್ಲಿ ಪೂರ್ವಭಾವಿ ಸಭೆ
ಸೆ.2 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳೂರಿಗೆ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ನಡೆಯುವ ಸಭಾ ಕಾರ್ಯಕ್ರಮಕ್ಕೆ ಸುಳ್ಯ ತಾಲೂಕಿನಿಂದ ಭಾಗವಹಿಸಲು ವಿವಿಧ ಯೋಜನೆಗಳಲ್ಲಿ ಒಟ್ಟು 3599 ಫಲಾನುಭವಿಗಳನ್ನು ಗುರುತಿಸಲಾಗಿದೆ. ಪಲಾನುಭವಿಗಳನ್ನು ಕರೆದೊಯ್ಯುವ ಕುರಿತು ಸಿದ್ಧತೆಗಾಗಿ ರೂಟ್ ನೋಡಲ್ ಅಧಿಕಾರಿಗಳು ಮತ್ತು ರೂಟ್ ಆಫೀಸರ್ಗಳ ಪೂರ್ವ ಭಾವಿ ಸಭೆ ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆ.30 ರಂದು ನಡೆಯಿತು.
ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್. ಅಂಗಾರ ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ತಹಶೀಲ್ದಾರ್ ಅನಿತಾ ಲಕ್ಷ್ಮಿ ಹಾಗು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಅಧಿಕಾರಿಗಳಿಗೆ ಮಾಹಿತಿ ಮತ್ತು ಸಲಹೆ ಸೂಚನೆಗಳನ್ನು ನೀಡಿದರು.
3599 ಫಲಾನುಭವಿಗಳು: ಪ್ರಧಾನ ಮಂತ್ರಿಗಳ ಕಾರ್ಯಕ್ರಮಕ್ಕೆ ತೆರಳಲು ಸುಳ್ಯ ತಾಲೂಕಿನಿಂದ 3599 ಫಲಾನುಭವಿಗಳನ್ನು ಗುರುತಿಸಲಾಗಿದೆ. ಸಂಜೀವಿನಿ ಯಲ್ಲಿ 500, ಪಿ.ಎಮ್ ಕಿಸಾನ್ ಯೋಜನೆಯಲ್ಲಿ 1000, ಮೆಸ್ಕಾಂ 625, ಪಿ.ಎಮ್ ಸ್ವನಿಧಿ 100, ಸ್ವಾಮಿತ್ಯ 150, ಆಯುಷ್ಮಾನ್ ಭಾರತ್ 224 ಫಲಾನುಭವಿ ಸೇರಿದಂತೆ ಇನ್ನಿತರ ಫಲಾನುಭವಿ ಗಳನ್ನು ಕರೆದುಕೊಂಡು ಹೋಗಲು ನಿರ್ಧಾರ ಮಾಡಲಾಯಿತು.
14 ರೂಟ್ನಿಂದ ಬಸ್ ಹೊರಡಲಿದೆ: ಫಲಾನುಭವಿಗಳನ್ನು ಕರೆದೊಯ್ಯಲು ಬಸ್ ಹೊರಡಲು 14 ರೂಟ್ಗಳನ್ನು ಗುರುತಿಸಲಾಗಿದೆ. ಪಂಜ, ನಿಂತಿಕಲ್ಲು, ಬೆಳ್ಳಾರೆ, ಗುತ್ತಿಗಾರು ಕೆಎಸ್ರ್ಟಿಸಿ ಬಸ್ ನಿಲ್ದಾಣ, ಕೊಲ್ಲಮೊಗ, ಎಲಿಮಲೆ, ಕುಕ್ಕುಜಡ್ಕ, ಸಂಪಾಜೆ ಕಲ್ಲುಗುಂಡಿ, ಅರಂತೋಡು, ಮರ್ಕಂಜ ಗೋಳಿಯಡ್ಕ, ಕೋಲ್ಕಾರು ಆಲೆಟ್ಟಿ, ಮಂಡೆಕೋಲು, ಜಾಲೂರು, ಸುಳ್ಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಿಂದ ಬಸ್ ಹೊರಡಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.