ಇಂದು ಸಂಜೆ ಸಂಗೀತ ರಸಮಂಜರಿ
ಸುಳ್ಯ ದಸರಾದ ೨ನೇ ದಿನ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಠಲ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಮೂಡಿಬಂತು. ಹಾಸ್ಯಭರಿತವಾಗಿದ್ದ ಈ ಕಾರ್ಯಕ್ರಮ ಸೇರಿದ್ದ ಜನರನ್ನು ನಗೆಗಡಲಲ್ಲಿ ತೇಲಿಸಿತ್ತು.
ಆಸರೆ ತಂಡ ಆಗಮನ : ಬೀರಮಂಗಲದ ಹಾರ್ದಿಕ್ ಎಂಬ ಬಾಲಕ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಆತನ ಚಿಕಿತ್ಸೆಗಾಗಿ ಸುಳ್ಯದ ಆಸರೆ ತಂಡದವರು ವಿಶೆಷ್ಟ ರೀತಿಯಲ್ಲಿ ವೇಷ ಧರಿಸಿ ನಿನ್ನೆ ಧನ ಸಂಗ್ರಹ ನಡೆಸಿದರು. ಸಂಜೆ ಈ ತಂಡ ಸುಳ್ಯ ದಸರಾ ಸಭಾಂಗಣಕ್ಕೆ ಬಂದು ತಮ್ಮ ಯೋಜನೆಯನ್ನು ಮುಂದಿಟ್ಟರು. ಈ ತಂಡವನ್ನು ಎಸ್ಸಿಕ್ಸ್ ಹಾಗೂ ದಸರಾ ಸಮಿತಿಯವರು ಸ್ವಾಗತಿಸಿದರು. ಯುವಕರ ಈ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ಅ. ೪ ರಂದು ಸಂಜೆ ೬.೩೦ಕ್ಕೆ ಅಯ್ಯಪ್ಪ ಭಜನಾ ಮಂದಿರ ದುಗಲಡ್ಕ ಇವರಿಂದ ಭಜನಾ ಸೇವೆ ನಡೆಯುವುದು. ಫ್ರೆಂಡ್ಸ್ ರಸಮಂಜರಿ ನಡೆಯಲಿದೆ.