ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಸರಕಾರದ ಮಾನ್ಯತೆ ದೇಣಿಗೆ ಹಸ್ತಾಂತರ ಮಾಡಿದ ರಶ್ಮಿ ಅಶೋಕ್ ನೆಕ್ರಾಜೆ

0

ಗುತ್ತಿಗಾರಿನಲ್ಲಿ ಆಂಬುಲೆನ್ಸ್ ಸೇವಾ ಯೋಜನೆಗಾಗಿ ಟ್ರಸ್ಟ್ ರಚಿಸಿ ಇದೀಗ ಆಂಬುಲೆನ್ಸ್ ಸೇವೆ, ರಕ್ತದಾನ ಶಿಬಿರ, ಯೋಗ ತರಬೇತಿ ಕೇಂದ್ರ ಸೇರಿದಂತೆ ಹಲವಾರು ಸಾಮಾಜಿಕ ಸೇವಾ ಕಾರ್ಯದಲ್ಲಿ ಸಕ್ರೀಯ ಸೇವೆ ಸಲ್ಲಿಸುತ್ತಿರುವ ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಗೆ ಇದೀಗ ಸರಕಾರದ ಕಾನೂನಿನ ಅಡಿಯಲ್ಲಿ 12A/80G ಮಾನ್ಯತೆ ನೀಡಿದೆ.

ಮಾನ್ಯತೆ ಪಡೆದ ಟ್ರಸ್ಟ್ ಗೆ ಪ್ರಥಮ ದೇಣಿಗೆಯ ಸದಸ್ಯರಾಗಿ ಸುಳ್ಯ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ರಶ್ಮಿ ಅಶೋಕ್ ನೆಕ್ರಾಜೆ ಅವರು ಸೇವಾ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಹಾಯಧನ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸುಳ್ಯ ತಾಲೂಕು ರೆಡ್ ಕ್ರಾಸ್ ಸಭಾಪತಿ ಪಿ. ಬಿ. ಸುಧಾಕರ್ ರೈ ನೆಟ್ ಕಾಂ, ನ್ಯಾಯವಾದಿ ಪ್ರದೀಪ್ ಕುಮಾರ್ ಕೆ. ಯಲ್. ಟ್ರಸ್ಟ್ ನ ಲೆಕ್ಕಪರಿಶೋಧಕರಾದ ಬಾಲಕೃಷ್ಣ ಗೌಡ ನಡುಗಲ್ಲು, ಟ್ರಸ್ಟ್ ಅಧ್ಯಕ್ಷ ಚಂದ್ರಶೇಖರ ಕಡೋಡಿ, ಟ್ರಸ್ಟ್ ಸದಸ್ಯ ಮೋಹನ್ ದಾಸ್ ಶಿರಾಜೆ ಉಪಸ್ಥಿತರಿದ್ದರು.