ಕೆ.ಎಂ . ದಯಾನಂದ ಕಲ್ಲುಗದ್ದೆ ನಿಧನ

0


ಅರಂತೋಡು ಗ್ರಾಮದ ಕಲ್ಲುಗದ್ದೆ ನಿವಾಸಿ ಕೆ.ಎನ್. ದಯಾನಂದರವರು ಇಂದು ಬೆಳಿಗ್ಗೆ ಅಸೌಖ್ಯದಿಂದ ಸುಳ್ಯ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 61 ವರ್ಷ ವಯಸ್ಸಾಗಿತ್ತು. ಕಿಡ್ನಿ ಸ್ಟೋನ್ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಇತ್ತೀಚೆಗೆ ಆಪರೇಷನ್ ಕೂಡ ಆಗಿತ್ತು.

ಇಂದು ಬೆಳಿಗ್ಗೆ ನೋವು ಕಂಡು ಬಂದಿದ್ದು, ಕೂಡಲೇ ಸುಳ್ಯ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಮೃತರು ಪತ್ನಿ ಕಮಲ, ಪುತ್ರಿಯರಾದ ಶ್ರಾವ್ಯ, ಕಾವ್ಯ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.