ಪಡ್ಪು ಶ್ರೀರಕ್ಷಾ ಸ್ವಸಹಾಯ ಸಂಘ ಇದರ ವಾರ್ಷಿಕ ಮಹಾಸಭೆ

0

ನಾಗರಿಕ ಸೇವಾ ಟ್ರಸ್ಟ್ ಗುರುವಾಯನಕೆರೆ ಪ್ರವರ್ತಿತ ಪಡ್ಪು ಶ್ರೀರಕ್ಷಾ ಸ್ವಸಹಾಯ ಸಂಘ ಬೆಳ್ಳಾರೆ ಇದರ 22 ನೇ ವರ್ಷದ ವಾರ್ಷಿಕ ಮಹಾಸಭೆ ಆಗೊಸ್ತು 13 ರಂದು ಕುರುಂಬುಡೇಲು ಕುಸುಮ ಇವರ ಮನೆ ವಠಾರದಲ್ಲಿ ನಡೆಯಿತು.

ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶೋಭನ ಪನ್ನೆ ವಹಿಸಿದ್ದರು. ವಾರ್ಷಿಕ ಲೆಕ್ಕಪತ್ರ ಹಾಗೂ ವರದಿಯನ್ನು ಕಾರ್ಯದರ್ಶಿ ಸವಿತಾ ಬಸ್ತಿಗುಡ್ಡೆ ಸಭೆಗೆ ಮಂಡಿಸಿ ಅನುಮೋದನೆ ಪಡೆಯಲಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ದೈಹಿಕ ಶಿಕ್ಷಣ ಶಿಕ್ಷಕರಾದ ಕೊರಗಪ್ಪ ಬೆಳ್ಳಾರೆ, ಬೆಳ್ಳಾರೆ ಸ್ನೇಹಿತರ ಕಲಾ ಸಂಘದ ಜೊತೆ ಕಾರ್ಯದರ್ಶಿ ಶ್ರೀನಿವಾಸ ಕುರುಂಬುಡೆಲು ಉಪಸ್ಥಿತರಿದ್ದು ಸಂದರ್ಭೋಚಿತವಾಗಿ ಮಾತನಾಡಿದರು.

ನಂತರ 2023- 24 ರ ಸಾಲಿನ ನೂತನ ಅಧ್ಯಕ್ಷ, ಕಾರ್ಯದರ್ಶಿಯ ಆಯ್ಕೆ ನಡೆದು ಅಧ್ಯಕ್ಷರಾಗಿ ಕುಸುಮ ಕುರುಂಬುಡೇಲು, ಕಾರ್ಯದರ್ಶಿಯಾಗಿ ಪೂರ್ಣಿಮಾ ಪಡ್ಪು ಆಯ್ಕೆಯಾದರು.ಪುಷ್ಪಾವತಿ ಕುರುಂಬುಡೇಲು ಸ್ವಾಗತಿಸಿ , ಮೀನಾಕ್ಷಿ ಪನ್ನೆ ವಂದಿಸಿ , ಪೂರ್ಣಿಮಾ ಪಡ್ಪು ಕಾರ್ಯಕ್ರಮ ನಿರೂಪಿಸಿದರು.