ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸಂಘದಿಂದ ದಿ.ಪಡ್ಪು ವಾಸುದೇವ ಗೌಡರಿಗೆ ಶ್ರದ್ಧಾಂಜಲಿ ಸಭೆ.

0

ಮಂಗಳೂರಿನ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಸ್ಥಾಪನೆಯಲ್ಲಿ ಮತ್ತು ಅದರ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಪಡ್ಪು ವಾಸುದೇವ ಗೌಡರ ಶ್ರದ್ಧಾಂಜಲಿ ಸಭೆ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ರಿ. ಮಂಗಳೂರು , ಮಹಿಳಾ ಘಟಕ , ಯುವ ಘಟಕದ ವತಿಯಿಂದ ಒಕ್ಕಲಿಗರ ಭವನ ಚಿಲಿಂಬಿ ಮಂಗಳೂರಿನಲ್ಲಿ ನಡೆಯಿತು .

ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗುರುದೇವ ಯು.ಬಿ. ವಹಿಸಿದ್ದರು. ಕಾರ್ಯದರ್ಶಿ ಡಿ.ಬಿ.ಬಾಲಕೃಷ್ಣರು ಸ್ವಾಗತಿಸಿದರು ಮತ್ತು ಮೃತರ ಒಡನಾಟದ ನೆನಪುಗಳನ್ನು ನ್ನು ಹಂಚಿಕೊಂಡರು.

ಸಂಘದ ಹಿರಿಯ ನಿರ್ದೇಶಕರಾದ ಲೋಕಯ್ಯ ಗೌಡರು ಮೃತರು ಸಂಘಕ್ಕೆ ನೀಡಿದಂತಹ ಕೊಡುಗೆ ಹಾಗೂ ದಾನಗಳು ಮತ್ತು ಸಂಘದ ಕಟ್ಟಡ ಕಟ್ಟುವಲ್ಲಿನ ಪರಿಶ್ರಮ ಹಾಗೂ ಅವರು ನಡೆಸಿದಂತಹ ಅಭಿವೃದ್ದಿ ಕಾರ್ಯಗಳ ಬಗ್ಗೆ ವಿವರಿಸಿ ಅವರ ಗುಣಗಾನಗೈದರು. ಉಪಾಧ್ಯಕ್ಷರಾದ ಪುರುಷೋತ್ತಮ ಕೆ.ವಿ. ಅವರು ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಿದರು.

ಯುವ ಘಟಕದ ಅಧ್ಯಕ್ಷರಾದ ಕಿರಣ್ ಬುಡ್ಲೆಗುತ್ತು ಅಗಲಿದ ಹಿರಿಯರ ಸಾಧನೆಗಳನ್ನು ನೆನಪಿಸಿಕೊಂಡು ಅವರ ಮಾರ್ಗದರ್ಶನವನ್ನು ಹಂಚಿಕೊಂಡರು. ಜತೆ ಕಾರ್ಯದರ್ಶಿ ರಾಮಚಂದ್ರ ಕೆ. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ನಿರ್ದೇಶಕರುಗಳು, ಮಹಿಳಾ ಘಟಕದ ಕಾರ್ಯದರ್ಶಿ ಶ್ರೀಮತಿ ಸಾರಿಕಾ ಸುರೇಶ್ ಹಾಗು ಮಹಿಳಾ ಘಟಕದ ಸದಸ್ಯರುಗಳು ಮತ್ತು ಯುವ ಘಟಕದ ಕಾರ್ಯದರ್ಶಿ ಕಿರಣ್ ಹೊಸಳಿಕೆ ಹಾಗೂ ಯುವ ಘಟಕದ ಸದಸ್ಯರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.