ಸಾಹಿತಿ, ಗಾಯಕ, ಜ್ಯೋತಿಷಿ ಭೀಮರಾವ್ ವಾಷ್ಠರ್ ರಿಗೆ ಕಾಸರಗೋಡಲ್ಲಿ ಸನ್ಮಾನ

0

ಸುಳ್ಯದ ಚಂದನ ಸಾಹಿತ್ಯ ವೇದಿಕೆಯ ಅಧ್ಯಕ್ಷ, ಸಾಹಿತಿ, ಜ್ಯೋತಿಷಿ, ಗಾಯಕರಾದ ಎಚ್ ಭೀಮರಾವ್ ವಾಷ್ಠರ್ ಅವರನ್ನು ಇತ್ತೀಚಿಗೆ ಕಾಸರಗೋಡಿನ ಬದಿಯಡ್ಕದ ಸಂಸ್ಕೃತಿ ಸಭಾಂಗಣದಲ್ಲಿ ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆಯ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಮತ್ತು ಕರೋಕೆ ಸಂಗೀತ ಸ್ಪರ್ಧೆಯ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆಯ ಅಧ್ಯಕ್ಷ ವಸಂತ್ ಬಾರಡ್ಕ, ಕರ್ನಾಟಕ ಇತಿಹಾಸ ಅಕಾಡೆಮಿಯ ಗಡಿನಾಡ ಘಟಕದ ಅಧ್ಯಕ್ಷರು ಶ್ರೀ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಡಾ.ರಾಮಚಂದ್ರ ಹೂಡಿ ಚಿನ್ನಿ ಕೋಲಾರ,
ರಾಜ್ಯ ಪತ್ರಕರ್ತರ ಸಂಘದ ಸದಸ್ಯ ಅಖಿಲೇಶ್ ನಗುಮುಗ, ನ್ಯಾಯವಾದಿ ಥೋಮಸ್ ಡಿಸೋಜ ಸೀತಾಂಗೋಳಿ, ವಿಶ್ವ ಮಾನವ ಡಾ.ರಾಜ್ ಕುಮಾರ್ ಫೌಂಡೇಶನ್ ಅಧ್ಯಕ್ಷರು ಆರ್.ಶಿವಕುಮಾರ್ ಗೌಡ (ಕನ್ನಡಿಗ) ಕೋಲಾರ ಇನ್ನಿತರರು ಉಪಸ್ಥಿತರಿದ್ದರು.