ಅಡ್ಕಾರು ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ – ಗುಳಿಗ ಕ್ಷೇತ್ರದಲ್ಲಿ ಶ್ರಮದಾನ

0

ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾ ಮಹೋತ್ಸವದ ಸಂಭ್ರಮದಲ್ಲಿರುವ ಜಾಲ್ಸೂರು ಗ್ರಾಮದ ಅಡ್ಕಾರಿನ ಅಂಬಾಡಿಮೂಲೆ ಶ್ರೀ ವಿಷ್ಣುಮೂರ್ತಿ – ಗುಳಿಗ ಕ್ಷೇತ್ರದಲ್ಲಿ ಭಕ್ತಾದಿಗಳಿಂದ ಶ್ರಮದಾನವು ಮಾ‌.17ರಂದು ನಡೆಯಿತು.

ದೈವಸ್ಥಾನದಲ್ಲಿ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ದೈವಗಳ ಕೋಲವು ಮಾ.21ರಿಂದ 23ರವರೆಗೆ ಜರುಗಲಿದೆ. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಗಣೇಶ್ ಅಂಬಾಡಿಮೂಲೆ, ಅಧ್ಯಕ್ಷ ಅಶೋಕ ಅಡ್ಕಾರು, ಸಂಯೋಜಕ ಭಾಸ್ಕರ ಅಡ್ಕಾರು, ಕಾರ್ಯದರ್ಶಿ ನವೀನ ಅಂಬಾಡಿಮೂಲೆ, ಕೋಶಾಧಿಕಾರಿ ಎ. ಗಂಗಾಧರ ವಿನೋಬನಗರ, ಸತೀಶ್ ಬೇರ್ಪಡ್ಕ ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು.