ಕಾನತ್ತಿಲ ಉಳ್ಳಾಕುಳ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಸುಳ್ಯದ ಕಾನತ್ತಿಲ ಉಳ್ಳಾಕುಳ ದೈದವಸ್ಥಾನದಲ್ಲಿ ದೈವಗಳ ವರ್ಷಾವಧಿ ನೇಮೋತ್ಸವಕ್ಕೆ‌ ಗೊನೆ ಮುಹೂರ್ತ ಎ.25 ರಂದು ನೆರವೇರಿತು.
ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ವಿ.ಹೇಮನಾಥ, ದಿನಕರ ಕಾನತ್ತಿಲ, ಕುರುಂಜಿ ದೇವಣ್ಣ ಗೌಡ, ಸಂದೇಶ್ ಕುರುಂಜಿ, ಕೆ.ಎಲ್.ಸತೀಶ್, ನರೇಶ್ ಕಾನತ್ತಿಲ, ಕೌಶಿಕ್ ಕಾನತ್ತಿಲ, ಯಜ್ಞೇಶ್ ಕಾನತ್ತಿಲ ಮತ್ತಿತರರು ಈಸಂದರ್ಭ ಉಪಸ್ಥಿತರಿದ್ದರು.
ಮೇ.1 ರಂದು ಮುಂಡಿಗೆ ಪೂಜೆ, ಮೇ.2 ರಂದು ಮುಂಡ್ಯದ ವಾಲಸಿರಿ, ಮೇ.13 ರಂದು ಸಂಜೆ ಕುರುಂಜಿ ಮಾಳಿಗೆಯಿಂದ ಭಂಡಾರ ಬರುವುದು, ಅಂದು ರಾತ್ರಿ ಸಂಕ್ರಮಣ ಪೂಜೆ ಹಾಗೂ ಮೇ.14 ರಂದು ಉಳ್ಳಾಕುಳ ನೇಮ ನಡೆಯಲಿದೆ ಎಂದು ತಿಳಿದುಬಂದಿದೆ.