ಕೊಡಗು ಸಂಪಾಜೆ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಮೇ 22 ರಂದು ಕೂಡಿ , ಮೇ 23 ರಂದು ಶಿರಾಡಿ ರಾಜನ್ ದೈವ ಮತ್ತು ಉಪದೈವಗಳ ಕಾಲಾವಧಿ ಪತ್ತನಾಜೆಯು ಹರಕೆ ಹಾಗೂ ಪ್ರಸಾದ ವಿತರಣೆಯೊಂದಿಗೆ ಸಂಪನ್ನ ಗೊಂಡಿತು.
![](https://sullia.suddinews.com/wp-content/uploads/2024/05/IMG-20240523-WA0091-680x1024.jpg)
ಮೇ 16 ರಂದು ಗೊನೆ ಕಡಿಯುವ ಮೂಹೂರ್ತ ನಡೆಯಿತು. ಮೇ 22 ರಂದು ಸ್ಥಳ ಶುದ್ಧೀಕರಣ ಹಾಗೂ ಸಂಪಾಜೆ ದೇವಜನ ಬಾಲಕೃಷ್ಣ ಅವರ ಚಾವಡಿಯಿಂದ ಭಂಡಾರ ತರಲಾಯಿತು. ಮೇ 23 ರಂದು ಬೆಳಿಗ್ಗೆ 5 ಗಂಟೆಯಿಂದ ಬಿರ್ ಮೆರ್, ಮದಿಮಲ್, ಬಚ್ಚ ನಾಯ್ಕ , ಮೂವೆ, ಕರಿಯ ನಾಯಕ, ಗಿಳಿ ರಾಮ ಸೇರಿದಂತೆ ಆರು ಉಪದೈವಗಳ ನಡಾವಳಿ ನಡೆಯಿತು. ಬಳಿಕ ಶಿರಾಡಿ ಶ್ರೀ ರಾಜನ್ ದೈವ, ಪುರುಷ ದೈವಗಳ ನಡಾವಳಿ ಮತ್ತು ಮಾರಿಕಳ, ಹರಕೆ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೈವಸ್ಥಾನದ ಮೊಕ್ತೇಸರರಾದ ಎಂ. ಬಿ. ಸದಾಶಿವ, ಅಧ್ಯಕ್ಷ ರಾಮಕೃಷ್ಣ ಕುಕ್ಕಂದೂರು, ಉಪಾಧ್ಯಕ್ಷ ನಾರಾಯಣ ಕುಕ್ಕೇಟಿ, ಕಾರ್ಯದರ್ಶಿ ರೋಹಿತ್ ಕುಕ್ಕೇಟಿ, ಸಹ ಕಾರ್ಯದರ್ಶಿ ವಿಜಯ ಕನ್ಯಾನ, ಖಜಾಂಜಿ ಶ್ರೀ ಪಾದ ಹೊಸಮನೆ, ಸಂಘಟನಾ ಕಾರ್ಯದರ್ಶಿ ರಚನ್ ಸುಳ್ಯಕೋಡಿ , ದೈವದ ಪೂಜಾರಿಗಳಾದ ಪ್ರಕಾಶ್ ಕಟ್ಟಕೋಡಿ , ಯಶವಂತ ಅಳಿಕೆ, ರಾಮಯ್ಯ, ನಿಕಟ ಪೂರ್ವ ಪೂಜಾರಿ ಬೆಳ್ಯಪ್ಪ ಹoಡನ ಮನೆ, ದೈವಸ್ಥಾನದ ಮನೆ ತನದವರಾದ ಇಂದಿರಾ ದೇವಿಪ್ರಸಾದ್, ಟೀನಾ ದೇವಿ ಚರಣ್, ಮೌರ್ಯ ಚರಣ್, ಅನ್ನದಾನ ಮೇಲ್ವಿಚಾರಕ ಶ್ರೀಧರ ಪಡ್ಫೂ , ಪುರುಷೋತ್ತಮ ನೂಜೆಲು, ಊರು ಗೌಡ್ರು ದೇವಪ್ಪ ಕುಮಾರಮಂಗಲ, ಮಾಜಿ ನಿಕಟ ಪೂರ್ವ ಅಧ್ಯಕ್ಷ ಕುಮಾರ್ ಚಿದ್ಕಾರ್, ಸಂಪಾಜೆ ಪಂಚಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಜಯಕುಮಾರ್ ಚಿದ್ಕಾರ್ , ಪಂಚಲಿಂಗೇಶ್ವರ ದೇವಸ್ಥಾನದ ಕಾರ್ಯದರ್ಶಿ ಕೇಶವ ಚೌಟಾಜೆ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ರಮಾದೇವಿ ಬಾಲಚಂದ್ರ ಕಳಗಿ, ಮಾಧವ ಕನ್ಯಾನ, ಸೃಜನ್ ಸುಳ್ಯಕೋಡಿ, ಶ್ರಾವಣ್ ಸುಳ್ಯಕೋಡಿ, ಸರ್ವ – ಸದಸ್ಯರು , ದೈವಸ್ಥಾನದ ಮನೆತನದವರು ಹಾಗೂ ಊರ -ಪರವೂರಿನವರು ಹೆಚ್ಛಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ದೇವರ ಕೃಪೆಗೆ ಪಾತ್ರರಾದರು.