ಜಾಲ್ಸೂರು: ಕದಿಕಡ್ಕದಲ್ಲಿ ಮಣ್ಣು ಹಾಕಿ ಎತ್ತರಿಸಿದ ವಿವಾದ

0

ಸರ್ಕಾರಿ ಸ್ಥಳವನ್ನು ಪ.ಜಾತಿಯವರಿಗೆ ಕಾಯ್ದಿರಿಸಲು ಶಾಸಕರಿಗೆ ಮನವಿ

ಜಾಲ್ಸೂರು ಗ್ರಾಮದ ಕದಿಕಡ್ಕದಲ್ಲಿ ಕಟ್ಟಡ ಕಟ್ಟುವ ಉದ್ದೇಶದಿಂದ ರಸ್ತೆ ಬದಿಯ ಜಾಗವನ್ನು ಮಣ್ಣು ಹಾಕಿ ಎತ್ತರಿಸುವ ಕಾಮಗಾರಿ ನಡೆದಿದ್ದು, ಅಲ್ಲಿರುವ ಸರ್ಕಾರಿ ಸ್ಥಳವನ್ನು ಪರಿಶಿಷ್ಟ ಜಾತಿ ಅವರಿಗೆ ನೀಡಬೇಕೆಂದು ಕದಿಕಡ್ಕ ಪರಿಶಿಷ್ಟ ಜಾತಿ ನಿವಾಸಿಗಳು ಹಾಗೂ ಸ್ಥಳೀಯರು ಶಾಸಕಿ ಭಾಗೀರಥಿ ಮರುಳ್ಯ ಅವರಿಗೆ ಮನವಿ ಮಾಡಿದ ಘಟನೆ ಮೇ.26ರಂದು ವರದಿಯಾಗಿದೆ.

ಜಾಲ್ಸೂರಿನ ಕದಿಕಡ್ಕದಲ್ಲಿ ಶ್ರೀಮತಿ ಉಷಾ ಕುಸುಮಾಧರ ಗೌಡ ಗೂನಡ್ಕ ಅವರು ತಮಗೆ ಸೇರಿದ ಜಾಗಕ್ಕೆ ಜೆಸಿಬಿ ಮತ್ತು ಟಿಪ್ಪರ್ ಮೂಲಕ ಮಣ್ಣು ಹಾಕಿ ಎತ್ತರಿಸುವ ಕೆಲಸ ಮಾಡಿದ್ದು, ಇದರಿಂದ ಅಲ್ಲಿಯ ಸಮೀಪದ ಮನೆಯವರಿಗೆ ಹಾಗೂ ಪರಿಶಿಷ್ಟ ಜಾತಿ ಕಾಲನಿಯ ನಿವಾಸಿಗಳಿಗೆ ತೊಂದರೆಯಾಗಿದ್ದು, ಅಲ್ಲಿರುವ ಸರ್ಕಾರಿ ಸ್ಥಳವನ್ನು ಪರಿಶಿಷ್ಟ ಜಾತಿಯವರಿಗೆ ನೀಡಬೇಕೆಂದು ಶಾಸಕರಿಗೆ ನೀಡಿದ ಮನವಿಯಲ್ಲಿ ಉಲ್ಲೇಖಿಸಲಾಗಿದೆ.