![](https://sullia.suddinews.com/wp-content/uploads/2024/05/image-252-1024x461.png)
ಕರ್ನಾಟಕ ಸರ್ಕಾರದ ಉಪಸಭಾಪತಿ ರುದ್ರಪ್ಪ ಲಮಾಣಿ ದಂಪತಿ ಸಹಿತ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೇ.26 ಭೇಟಿ ನೀಡಿ ದೇವರಿಗೆ ಪೂಜೆ ಸಲ್ಲಿಸಿದರು.
ಈ ಸಂದರ್ಭ ಕಾರ್ಯನಿರ್ವಹಣಾಧಿಕಾರಿ ಡಾl ನಿಂಗಯ್ಯ, ಕಾಂಗ್ರೆಸ್ಸಿನ ಸುಬ್ರಹ್ಮಣ್ಯ ಗ್ರಾಮ ಸಮಿತಿಯ ಅಧ್ಯಕ್ಷ ಹರೀಶ ಇಂಜಾಡಿ, ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ದೇವರಗದ್ದೆ, ಮೋಹನದಾಸ ರೈ, ಸುರೇಶ ಭಟ್ ಉಪಸ್ಥಿತರಿದ್ದರು. ಭೇಟಿ ಸಂದರ್ಭ ಉಪ ಸಭಾಪತಿ ಅವರು ಮೇ.31 ರಂದು ನಿವೃತ್ತರಾಗಲಿರುವ ಕಾರ್ಯನಿರ್ವಹಣಾಧಿಕಾರಿ ನಿಂಗಯ್ಯ ಅವರನ್ನು ಗೌರವಿಸಿದರು.