77ನೇ ಹುಟ್ಟು ಹಬ್ಬದ ಪ್ರಯುಕ್ತಸವಣೂರಿನ ಶಿಲ್ಪಿ

0

ಸವಣೂರು ವಿದ್ಯಾರಶ್ಮಿ ವಿದ್ಯಾಲಯ…
ಅಲ್ಲಿದೆ ಸರಸ್ವತಿಯ ದೇವಾಲಯ.
ಹಲವರ ಜೀವನಕ್ಕೆ ಬೆಳಕು ನೀವು,
ಬೆಳಕಲ್ಲಿ ದಾರಿ ಕಂಡವರು ನಾವು.

ದಾನ ಶೂರ ಕರ್ಣನನ್ನು ಕಂಡಿಲ್ಲ…
ಕರ್ಣನನ್ನು ನಿಮ್ಮಲ್ಲೇ ಕಂಡಿಹೆವು ನಾವೆಲ್ಲ.
ಗೋಮಾತೆಯ ರಕ್ಷಕರು ನೀವೇ,
ಕ್ಷೀರ ಧಾರೆಯ ಹರಿಸಿದವರು ನೀವೇ.

ನಿಮ್ಮ ಮನಸ್ಸು ತುಂಬಾ ಪ್ರಶಾಂತ…
ನಿಜವಾಗಿ ನೀವು ಒಳ್ಳೆಯ ಹೃದಯವಂತ.
ನಮಗೆಲ್ಲ ನೀವಾಗಿರುವಿರಿ ಅನ್ನದಾತ,
ಊರಿಗೆ ಊರೇ ಹೊಗಳುವರು ಗುಣವಂತ.
ಕಳೆಯಲಿ ಇನ್ನು ಹಲವಾರು ವರುಷ,
ನಮಗೆಲ್ಲ ನೀವಾಗುವಿರಿ ಆದರ್ಶ.

✍️ ಪ್ರಿಯಾ ಸುಳ್ಯ