ಸುಳ್ಯ :ಓಡಬಾಯಿ ಸಮೀಪ ವಿದ್ಯುತ್ ಕಂಬಕ್ಕೆ ಆವರಿಸಿರುವ ಕಾಡು ಪೊದೆಗಳು

0

ಸುಳ್ಯದ ಓಡಬಾಯಿ ಸಮೀಪ ಮಾಣಿ ಮೈಸೂರು ಹೆದ್ದಾರಿ ಬಳಿ ವಿದ್ಯುತ್ ಕಂಬಕ್ಕೆ ಕಾಡು ಪೊದೆಗಳು ಆವರಿಸಿಕೊಂಡು ವಿದ್ಯುತ್ ಕಂಬವಾ ಅಥವಾ ಮರವೋ ಎಂಬ ಸಂಶಯ ಮೂಡಿಸುವ ರೀತಿಯಲ್ಲಿ ಕಂಡುಬರುತ್ತಿದೆ.


ಸಂಬಂಧಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿ ಈ ಕಾಡು ಪೊದೆಗಳನ್ನು ತೆರವುಗೊಳಿಸಿಕೊಡುವಂತೆ ಸ್ಥಳೀಯ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಮಳೆ ಬರುವ ಸಂದರ್ಭ ಅದರಿಂದ ವಿದ್ಯುತ್ ಸ್ಪಾರ್ಕ್ ಆಗುತ್ತಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.