ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಲೆಕ್ಕಪತ್ರ ಮಂಡನಾ ಸಭೆ

0

ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜರಗಿದ ಜಾತ್ರೋತ್ಸವದ ಲೆಕ್ಕಪತ್ರ ಮಂಡನಾ ಸಭೆಯು ಜೂ.22 ರಂದು ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು ಅಧ್ಯಕ್ಷತೆ ವಹಿಸಿದ್ದರು.


ವ್ಯವಸ್ಥಾಪನಾ ಸಮಿತಿ ಸದಸ್ಯ ಉದಯಪ್ರಸಾದ್ ಅಜಪಿಲ ಸ್ವಾಗತಿಸಿ,ಲೆಕ್ಕಪತ್ರ ಮಂಡಿಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಗಂಗಾಧರ ರೈ ಪುಡ್ಕಜೆ, ರಾಧಾಕೃಷ್ಣ ಕುಲಾಲ್,ಶಮಿತ ಪಿ.ರೈ, ಎ.ಕೆ.ಮಣಿಯಾಣಿ, ಮಾಜಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ, ಮಹಾಲಿಂಗ ಬೆಳ್ಳಾರೆ, ರವೀಂದ್ರ ರೈ ಅಜಪಿಲ, ಸಂಜಯ್ ಬೆಳ್ಳಾರೆ,ರಾಮ ಪೆರುವಾಜೆ,ಜಗದೀಶ ರೈ ತಂಬಿನಮಕ್ಕಿ,ಸೋಮಶೇಖರ್ ಆದಳ,ವಿಖ್ಯಾತ್ ರೈ, ಕಚೇರಿ ವ್ಯವಸ್ಥಾಪಕ ಮಹೇಶ ಕಲ್ಲಪಣೆ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.