ಸುಬ್ರಹ್ಮಣ್ಯ: ನದಿಗೆ ಪ್ಲಾಸ್ಟಿಕ್ ತ್ಯಾಜ ಎಸೆದ ಅಂಗಡಿಯಾತನಿಗೆ ಪಂಚಾಯತ್ ವತಿಯಿಂದ ದಂಡ

0

ಸುಬ್ರಹ್ಮಣ್ಯದಲ್ಲಿ ನದಿಗೆ ಪ್ಲಾಸ್ಟಿಕ್ ತ್ಯಾಜ ಎಸೆದ ಅಂಗಡಿಯಾತನೊಬ್ಬನಿಗೆ ಸುಬ್ರಹ್ಮಣ್ಯ ಗ್ತಾಮ ಪಂಚಾಯತ್ ವತಿಯಿಂದ ದಂಡ ವಿಧಿಸಿದ ಘಟನೆ ಜೂ.21 ರಂದು ನಡೆಯಿತು.

ಸುಬ್ರಹ್ಮಣ್ಯದ ಸವಾರಿ ಮಂಟಪ ಬಳಿ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಅಂಗಡಿ  ವ್ಯಾಪಾರ ನಡೆಸುತ್ತಿರುವ ಅಪರಿಚಿತ ವ್ಯಕ್ತಿಯೊಬ್ಬ ತನ್ನ ಅಂಗಡಿಯಿಂದ ಪ್ಲಾಸ್ಟಿಕ್ ಇನ್ನಿತರ ತ್ಯಾಜ್ಯಗಳನ್ನು ದರ್ಪಣ ತೀರ್ಥ ನದಿಗೆ ಎಸೆಯುತ್ತಿರುವುದನ್ನು ರೆಡ್ ಹೇಂಡ್ ಆಗಿ ಹಿಡಿದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ ವರು ರೂ. 1000/-ದಂಡ ವಿಧಿಸಿದ್ದಾರೆ.


ಮುಂದಿನ ದಿನಗಳಲ್ಲಿ ಈ ರೀತಿ ನದಿಗೆ, ರಸ್ತೆಯಲ್ಲಿ, ಹಾಗೂ ಎಲ್ಲೆಂದರಲ್ಲಿ ಪ್ಲಾಸ್ಟಿಕ್ ಸೇರಿದಂತೆ ಯಾವುದೇ ರೀತಿಯ ತ್ಯಾಜ್ಯ ಗಳನ್ನು ಎಸೆಯುವುದು ಕಂಡುಬಂದಲ್ಲಿ ದಂಡ ವಿಧಿಸಲಾಗುವುದು ಗ್ರಾ.ಪಂ ವತಿಯಿಂದ ಎಚ್ಚರಿಕೆ ನೀಡಲಾಗಿದೆ.