ಸುದ್ದಿ ವೆಬ್‌ಸೈಟ್ ವರದಿಗೆ ಸ್ಪಂದನೆ

0

ಓಡಬಾಯಿ ಬಳಿ ವಿದ್ಯುತ್ ಕಂಬಕ್ಕೆ ಆವರಿಸಿದ್ದ ಕಾಡು ಪೊದೆಗಳ ತೆರವು

ಮೆಸ್ಕಾಂ ಇಲಾಖೆಯ ಕಾರ್ಯಕ್ಕೆ ಸ್ಥಳೀಯರಿಂದ ಪ್ರಶಂಸೆ

ಸುಳ್ಯದ ಓಡಬಾಯಿ ಸಮೀಪ ಮಾಣಿ ಮೈಸೂರು ಹೆದ್ದಾರಿ ಬಳಿ ವಿದ್ಯುತ್ ಕಂಬಕ್ಕೆ ಕಾಡು ಪೊದೆಗಳು ಆವರಿಸಿಕೊಂಡ ವರದಿಯನ್ನು ಜೂ. 21 ರಂದು ಸುದ್ದಿ ವೆಬ್‌ಸೈಟ್‌ನಲ್ಲಿ ವರದಿ ಪ್ರಕಟಿಸಲಾಗಿತ್ತು.


ಈ ವರದಿಗೆ ಸ್ಪಂದಿಸಿರುವ ಸುಳ್ಯ ಮೆಸ್ಕಾಂ ಇಲಾಖೆ ಇಂದು ಬೆಳಿಗ್ಗೆನೇ ಈ ಕಾಡು ಪೊದೆಗಳನ್ನು ತೆರವುಗೊಳಿಸಿದ್ದು ಸ್ಥಳೀಯರ ಪ್ರಶಂಸೆಗೆ ಪಾತ್ರವಾಗಿದೆ.
ಮಳೆ ಬರುವ ಸಂದರ್ಭ ಅದರಿಂದ ವಿದ್ಯುತ್ ಸ್ಪಾರ್ಕ್ ಆಗುತ್ತಿದ್ದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿತ್ತು.