ಸುಬ್ರಹ್ಮಣ್ಯ: ಕೆ.ಎಸ್.ಆರ್.ಟಿ‌. ಸಿ ಬಸ್ ತಂಗುದಾಣದಲ್ಲಿ ಕಸದ ರಾಶಿ

0

ಸುಬ್ರಹ್ಮಣ್ಯದ ಕೆ.ಎಸ್.ಆರ್.ಟಿ .ಸಿ ಬಸ್ ತಂಗುದಾಣದಲ್ಲಿ ಕಸದ ರಾಶಿ ಕಂಡು ಬಂದಿದೆ.

ಬಸ್ ತಂಗುದಾಣದ ಸುತ್ತಮುತ್ತ ಕಸದ ರಾಶಿ ಬಿದ್ದಿದ್ದು, ಕಸವನ್ನು ಕಟ್ಟಿ ಇಟ್ಟ ಚೀಲಗಳು ರಾಶಿ ಬೀಳಲಾರಂಬಿಸಿವೆ. ಕಳೆದ 4-5 ದಿನಗಳಿಂದ ಕಸ ಹಾಗೇ ಇದ್ದು ವಿಲೇವಾರಿ ಮಾಡದೆ ವಾಸನೆ ಏಳಲಾರಂಭಿಸಿದೆ. ಇನ್ನು ರೋಗ ಹರಡಲೊಂದೇ ಬಾಕಿ ಎಂಬಂತಾಗಿದೆ. ದಿನಂಪ್ರತಿ ಸಾವಿರಾರು ಯಾತ್ರಾರ್ಥಿಗಳು ಬರವ ತಾಣದಲ್ಲಿ ಗಲೀಜು ತುಂಬಿ ತುಳುಕಲು ಆರಂಭಿಸಿದ್ದು ಯಾತ್ರಾರ್ಥಿಗಳು ಹಿಡಿಶಾಪ ಹಾಕಲು ಆರಂಭಿಸಿದ್ದಾರೆ.