ಚೆಂಬು: ಊರುಬೈಲಿನಲ್ಲಿ ಕೃಷಿಕರ ತೋಟಕ್ಕೆ ಕಾಡಾನೆ ದಾಳಿ

0

ಚೆಂಬು ಗ್ರಾಮದ ಊರುಬೈಲಿನಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿ, ಅಪಾರ ಪ್ರಮಾಣದ ಕೃಷಿ ಹಾನಿಯಾದ ಘಟನೆ ಜೂ.27ರಂದು ರಾತ್ರಿ ಸಂಭವಿಸಿದೆ.

ರಾತ್ರಿಯ ವೇಳೆ ಕಾಡಾನೆಗಳು ಕೃಷಿಕರ ತೋಟಕ್ಕೆ ಲಗ್ಗೆ ಇಟ್ಟಿದ್ದು, ನಿಡಿಂಜಿ ಭೋಜಪ್ಪ, ನಿಡಿಂಜಿ ಕುಶಾಲಪ್ಪ, ನಿಡಿಂಜಿ ವಾಸುದೇವ, ನಿಡಿಂಜಿ ಮನಮೋಹನ ಸೇರಿದಂತೆ ಮತ್ತಿತರ ಕೃಷಿಕರ ತೋಟದಲ್ಲಿ ಸಂಚರಿಸಿ ಕೃಷಿ ನಾಶ ಮಾಡಿರುವುದಾಗಿ ತಿಳಿದುಬಂದಿದೆ.