ಅಡ್ಕಾರು : ಕೃಷಿ ಚಟುವಟಿಕೆ ಕುರಿತು ಮಾಹಿತಿ ಕಾರ್ಯಾಗಾರ

0

ಜಾಲ್ಸೂರು ಗ್ರಾಮ ಪಂಚಾಯತ್, ಸುಬ್ರಮಣ್ಯ ಸಂಜೀವಿನಿ ಒಕ್ಕೂಟ ಮತ್ತು ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ (ನಿ.) ವಿಟ್ಲ,೩ ಈ ಆಯಿಲ್ ಕಂಪೆನಿ (ಲಿ.)ನ ಜಂಟಿ ಆಶ್ರಯದಲ್ಲಿ ಅಣಬೆ ಕೃಷಿ ಮಾಹಿತಿ, ತಾಳೆ ಬೆಳೆ ಬಗ್ಗೆ ಮಾಹಿತಿ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆಯ ರೇಷ್ಮೆ, ತೋಟಗಾರಿಕಾ ಬೆಳೆ ಇತರ ಕೃಷಿ ಚಟುವಟಿಕೆ ಕುರಿತು ಮಾಹಿತಿ ಕಾರ್ಯಾಗಾರ ಸಂಜೀವಿನಿ ಕಟ್ಟಡ ಅಡ್ಕಾರು ಇಲ್ಲಿ ಅ. ೨೮ರಂದು ನಡೆಯಿತು.


ಗ್ರಾಮ ಪಂಚಾಯತ್ ಒಕ್ಕೂಟ ಅಧ್ಯಕ್ಷೆ ಶ್ರೀಮತಿ ಕುಸುಮಾವತಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಸಾವಿತ್ರಿ ಅಡ್ಕಾರು, ೩ ಎಫ್ ಆಯಿಲ್ ಕಂಪನಿ (ಲಿ.) ಇದರ ಏರಿಯಾ ಮ್ಯಾನೇಜರ್ ಕೃಷ್ಣಾ ವೈ.ಟಿ., ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶ್ರೀಮತಿ ಶ್ವೇತ ಎನ್. ಆರ್.ಎಲ್.ಎಂ ತಾಲೂಕು ಪಂಚಾಯತ್ ಸುಳ್ಯ, ಬಿಆರ್‌ಪಿ ಪಿಆರ್‌ಐ ಶ್ರೀಮತಿ ಜಯಲಕ್ಷ್ಮೀ ತಾಲೂಕು ಪಂಚಾಯತ್ ಸುಳ್ಯ, ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವತಿಯಿಂದ ಕೃಷಿ ಸಖಿ ಮೋಹಿನಿ ವಿಶ್ವನಾಥ್ (ನಿಶಾ) ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಅಣಬೆ ಕೃಷಿ ಬಗ್ಗೆ ಪ್ರಥಮ ಬಾರಿಗೆ ಕೃಷಿ ಇಲಾಖೆಯ ಮೂಲಕ ತರಬೇತಿ ಪಡೆದುಕೊಂಡ ಕೃಷಿ ಸಖಿಯರಾದ ಜಾಲ್ಸೂರು, ಆಲೆಟ್ಟಿ, ಮಡಪ್ಪಾಡಿ, ಕನಕಮಜಲು, ಸಂಪಾಜೆ ಇವರು ರೈತರಿಗೆ, ಮಹಿಳಾ ಸದಸ್ಯರಿಗೆ, ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು.
ಕೃಷಿ ಸಖಿಯರಿಗೆ ಆಲೆಟ್ಟಿಯ ಯುವ ರೈತರಾದ ಆಕಾಶ್ ಅವರು ಹೆಚ್ಚಿನ ಮಾಹಿತಿ ನೀಡಿ ಸಹಕರಿಸಿದರು. ಕಾರ್ಯಕ್ರಮದಲ್ಲಿ ಮಾದಕ ಮುಕ್ತ ಕರ್ನಾಟಕ ಅಭಿಯಾನ ಮಾಹಿತಿ ನೀಡಲಾಯಿತು.


ಬಿಆರ್‌ಪಿ ಪಿಆರ್‌ಐ ಅವರಿಂದ ಪ್ರತಿಜ್ಞೆ ಬೋಧಿಸಲಾಯಿತು. ಕಾರ್ಯಕ್ರಮದಲ್ಲಿ ಎಂಬಿಕೆ. ಎಲ್‌ಸಿಆರ್‌ಐ, ಕೃಷಿ ಸಖಿ, ಪದಾಧಿಕಾರಿಗಳು, ಸದಸ್ಯರು, ವಿಆರ್‌ಡಬ್ಲ್ಯೂ ರೈತರು, ಹಾಜರಿದ್ದರು.


ಎಂಬಿಕೆ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಸವಿತಾ ಸ್ವಾಗತಿಸಿದರು. ವಿಜಯ ಕೃಷಿ ಸಖಿ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.


೩ ಎಫ್ ಆಯಿಲ್ ಕಂಪೆನಿ ವತಿಯಿಂದ ಮಾಲ್ಟ್, ಬಿಸ್ಕೆಟ್ ಹಾಗೂ ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.