















ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು, ನ.18ರಂದು ನಿಧನರಾದ ಈಶ್ವರ ರೈ ನೀರಬಿದಿರೆ ಇವರ ಮರಣ ಸಾಂತ್ವನ ನಿಧಿ ರೂ.11000/- ವನ್ನು ಪುತ್ರ ಲತೀಶ್ ರವರಿಗೆ ಸಂಘದ ಅಧ್ಯಕ್ಷರಾದ ದಾಮೋದರ ಗೌಡ ಮದುವೆಗದ್ದೆ ವಿತರಿಸಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಗಂಗಾಧರ್ ಪಿ.ಎಸ್, ಹರಿಪ್ರಸಾದ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಹಾಗೂ ಶಿವರಾಮ ಎಂ.ಪಿ, ಭರತ್ ಮಾಣಿಬೆಟ್ಟು, ಸಿಬ್ಬಂದಿ ದರ್ಶನ್ ಮತ್ತಿತರರು ಉಪಸ್ಥಿತರಿದ್ದರು.










