ಜಾಲ್ಸೂರು : ಬೈಕ್ ಗೆ ಹಿಂಬದಿಯಿಂದ ಗುದ್ದಿದ ಸ್ಕೂಟಿ – ಅಪಘಾತವೆಸಗಿ ಪರಾರಿ

0

ಜಾಲ್ಸೂರಿನ ಕಾಳಮ್ಮನೆ ಬಳಿ ಬೈಕ್ ಸವಾರರೊಬ್ಬರು ತನ್ನ ಮನೆಗೆ ಊಟಕ್ಕೆ ಬರುತ್ತಿದ್ದ ಸಂದರ್ಭ ಮನೆ ಕಡೆ ಬೈಕ್ ತಿರುಗಿಸುತ್ತಿದ್ದ ವೇಳೆ ಹಿಂದಿನಿಂದ ರಭಸವಾಗಿ ಬಂದ ಸ್ಕೂಟಿ ಬೈಕಿಗೆ ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಬೈಕ್ ಸವಾರನ ಕಾಲಿಗೆ ಗಾಯವಾದ ಘಟನೆ ಜೂ.27ರಂದು ಮಧ್ಯಾಹ್ನ ಸಂಭವಿಸಿದೆ.

ಜಾಲ್ಸೂರಿನ ಜೆ.ಕೆ ಕಾಂಪ್ಲೆಕ್ಸ್ ಮಾಲಕ, ಉದ್ಯಮಿ ಜೆ.ಕೆ ಜಯಂತ ಗೌಡರು ಮಧ್ಯಾಹ್ನ ತನ್ನ ಬೈಕ್ ನಲ್ಲಿ ಮನೆಗೆ ಊಟಕ್ಕೆ ಬರುತ್ತಿದ್ದ ಸಂದರ್ಭ ಕಾಳಮ್ಮನೆ ಎಂಬಲ್ಲಿ ತನ್ನ ಮನೆ ಕಡೆಗೆ ಬೈಕ್ ತಿರುಗಿಸಿದಾಗ ಹಿಂಬದಿಯಿಂದ ರಭಸವಾಗಿ ಬಂದ ಸ್ಕೂಟಿ ಸವಾರನೊಬ್ಬ ಬೈಕಿಗೆ ಗುದ್ದಿ, ಅಪಘಾತ ನಡೆಸಿ ಪರಾರಿಯಾಗಿದ್ದಾನೆ.

ಗುದ್ದಿದ ರಭಸಕ್ಕೆ ಜೆ.ಕೆ ಜಯಂತ ಗೌಡರು ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ಬಲದ ಕಾಲು ಜಖಂಗೊಂಡಿದ್ದು, ಸ್ಥಳೀಯರು ಅವರನ್ನು ಉಪಚರಿಸಿದ ನಂತರ ಅದೇ ದಾರಿಯಲ್ಲಿ ಬರುತ್ತಿದ್ದ ಭವಾನಿಶಂಕರ ಕಲ್ಮಡ್ಕ ಮತ್ತು ಚೇತನ್ ಕಜೆಗದ್ದೆ ಸೇರಿಕೊಂಡು ಮನೆಯಲ್ಲಿ ಉಪಚರಿಸಿ ಜಯಂತ ಗೌಡರ ಕಾರಿನಲ್ಲೇ ಅವರನ್ನು ಕೆವಿಜಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಇದೀಗ ಅವರನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.