ಜೂ.30ರಂದು ಮುಖ್ಯೋಪಾಧ್ಯಾಯ ರಾಮಚಂದ್ರ ಕಜ್ಜೋಡಿ ನಿವೃತ್ತಿ

0

ಹರಿಹರ ಪಲ್ಲತಡ್ಕ ಗ್ರಾಮದ ಕಜ್ಜೋಡಿಯವರಾಗಿದ್ದು ಸರ್ಕಾರಿ ಪ್ರೌಢಶಾಲೆ ಎಡಮಂಗಲ ಇಲ್ಲಿನ ಮುಖ್ಯೋಪಾಧ್ಯಾಯ, ಹರಿಹರ ಪಲ್ಲತಡ್ಕ ಪ್ರೌಢಶಾಲೆ ಯ ಪ್ರಭಾರ ಮುಖ್ಯೋಪಾಧ್ಯಾಯ ರಾಮಚಂದ್ರ ಕಜ್ಜೋಡಿ ಅವರು ಜೂ.30ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.

1994 ರಲ್ಲಿ ದುಗಲಡ್ಕ ಪ್ರೌಢಶಾಲೆಗೆ ಸಹ ಶಿಕ್ಷಕರಾಗಿ ಸೇರ್ಪಡೆಗೊಂಡ ಇವರು 1995ರಲ್ಲಿ ಹರಿಹರ ಪಲ್ಲತಡ್ಕ ಪ್ರೌಢಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಅಲ್ಲಿ 2020 ರ ವರೆಗೆ ಶಿಕ್ಷಕರಾಗಿ ಸೇವಿ ಸಲ್ಲಿಸಿದ್ದು, ಈ ಮಧ್ಯೆ ಒಂದು ವರ್ಷ ಶಿಕ್ಷಣ ಸಂಯೋಜಕರಾಗಿಯೂ ಕೆಲಸ ನಿರ್ವಹಿಸಿದ್ದರು. 2020 ರಲ್ಲಿ ಭಡ್ತಿಗೊಂಡು ಎಡಮಂಗಲ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಆರಂಭಿಸಿದ್ದಾರೆ. ಇದರೊಂದಿಗೆ ಹರಿಹರ ಪಲ್ಲತಡ್ಕ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ತಮ್ಮ ಸೇವಾ ಅವಧಿಯಲ್ಲಿ ಗಣಿತ ಶಿಕ್ಷಕರಾಗಿ ಸಾಕಷ್ಟು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.


ಇವರು ಹರಿಹರ ಪಲ್ಲತಡ್ಕ ಗ್ರಾಮದ ದಿl ಶಾಂತಪ್ಪಗೌಡ ಕಜ್ಜೋಡಿ ಅವರ ಪುತ್ರ. ತನ್ನ ಪ್ರಾಥಮಿಕ ಶಿಕ್ಷಣವನ್ನು ಹರಿಹರದಲ್ಲಿ, ಪ್ರೌಢ ಶಿಕ್ಷಣವನ್ನು ಗುತ್ತಿಗಾರಿನಲ್ಲಿ, ಪಿಯು ಶಿಕ್ಷಣವನ್ನು ಸುಬ್ರಹ್ಮಣ್ಯ ದಲ್ಲಿ, ಪದವಿ ಶಿಕ್ಷಣವನ್ಬು ಫಿಲೋಮಿನಾ ಪುತ್ತೂರಿನಲ್ಲಿ ಪೂರೈಸಿ, ವಿರಾಜಪೇಟೆಯಲ್ಲಿ ಬಿ.ಎಡ್ ಪದವಿಯನ್ನು ಪಡೆದಿರುತ್ತಾರೆ. ಇವರ ಪತ್ನಿ ಸಾವಿತ್ರಿ ಎನ್ ಹರಿಹರ ಪಲ್ಲತಡ್ಕ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯಾಗಿದ್ದು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಭಾರ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಗ ಬೋಧನ್ ಉದ್ಯೋಗ ಅರಸಿ ಕೋಚಿಂಗ್ ಪಡೆಯುತಿದ್ದಾರೆ.