ಪೈಂಬೆಚ್ಚಾಲ್ ರಸ್ತೆ ಬದಿ ಕುಸಿತ

0

ತಡೆಗೋಡೆ ನಿರ್ಮಿಸಲು ಜಿಲ್ಲಾಧಿಕಾರಿ ಯವರಿಗೆ ಮನವಿ

ಅಲೆಟ್ಟಿ ಗ್ರಾಮ ಪಂಚಾಯತಿನ 2 ನೇ ವಾರ್ಡಿನ ಪೈಂಬೆಚ್ಚಾಲು ಎಂಬಲ್ಲಿ ಸಂಪರ್ಕ ಕಲ್ಪಿಸುವ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ ಕೂಳಿಯಡ್ಕ ನಾರಾಯಣ ಎಂಬವರ ಮನೆ ಪಕ್ಕದಲ್ಲಿ ಹರಿಯುತ್ತಿರುವ ತೋಡಿನ ಬದಿಕುಸಿತವಾಗಿದೆ.

ಮಳೆ ಜೋರಾಗಿ ಸುರಿಯುವ ಸಂದರ್ಭದಲ್ಲಿ ವಿಪರೀತ ನೀರಿನ ಹರಿವು ಹೆಚ್ಚುವುದರಿಂದ ರಸ್ತೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇರುವುದು.

ರಸ್ತೆಯ ಉಳಿವಿಗಾಗಿ ಕೂಡಲೇ ತಡೆಗೋಡೆ ನಿರ್ಮಿಸಬೇಕೆಂದು ಬೇಡಿಕೆ ಇರಿಸಿ ಜಿಲ್ಲಾಧಿಕಾರಿಯವರಿಗೆ ಪಂ.ಸದಸ್ಯೆ ಗೀತಾ ಕೋಲ್ಚಾರು ,ಧರ್ಮಪಾಲ ಕೊಯಿಂಗಾಜೆ ಯವರು ಮನವಿ ನೀಡಿದರು. ಸ್ಥಳೀಯ ನಿವಾಸಿ ನಿಸಾರ್ ತೋಟಕೊಚ್ಚಿ ಮತ್ತಿತರರು ಜತೆಯಲ್ಲಿದ್ದರು.