ಜಯನಗರ : ಕೊಯಿಂಗೋಡಿ – ಕುದ್ಫಾಜೆ ರಸ್ತೆ ಬದಿ ಕಸ ಎಸೆಯುತ್ತಿದ್ದ ವ್ಯಕ್ತಿಯನ್ನು ಹಿಡಿದ ಸ್ಥಳೀಯರು

0

ಜಯನಗರದ ಕೊಯಿಂಗೋಡಿ – ಕುದ್ಫಾಜೆ ರಸ್ತೆ ಬದಿ ಕಸ ಎಸೆಯುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದಿದ್ದು, ಕಸ ಬಿಸಾಡಿದ ವ್ಯಕ್ತಿಯಿಂದಲೇ ಕಸವನ್ನು ಹೆಕ್ಕಿಸಿ, ಇನ್ನು ಮುಂದೆ ಕಸ ಎಸೆಯಂತೆ ಎಚ್ಚರಿಕೆ ನೀಡಿದ ಘಟನೆ ಇಂದು ಸಂಜೆ ವರದಿಯಾಗಿದೆ.


ಕೆಲ ಸಮಯಗಳಿಂದ ಜಯನಗರದ ಕೊಯಿಂಗೋಡಿ – ಕುದ್ಫಾಜೆ ರಸ್ತೆ ಬದಿ ಯಾರೋ ಕಸ ಎಸೆದು ಹೋಗುತ್ತಿದ್ದರು. ಇದನ್ನು ತಿಳಿಯಲು ಸ್ಥಳೀಯರು ಕಾದು ಕುಳಿತಿದ್ದರು. ಇಂದು ಸಂಜೆ ಕಸ ತೆಗೆದುಕೊಂಡು ಬಿಸಾಡುತ್ತಿದ್ದ ಸಂದರ್ಭ ಆತ ಕಸದ ಸಮೇತ ಸಿಕ್ಕಿಬಿದ್ದನೆನ್ನಲಾಗಿದೆ.


ಈತ ಜಯನಗರದ ಆಶ್ರಯ ಕಾಲೋನಿಯ ವ್ಯಕ್ತಿ ರಾಜೇಶ್ ಆಗಿದ್ದು, ಕಸ ಬಿಸಾಡುತ್ತಿದ್ದದ್ದು ತಾನೇ ಎಂದು ಒಪ್ಪಿಕೊಂಡನೆನ್ನಲಾಗಿದೆ. ನಂತರ ಸುಳ್ಯ ಪೊಲೀಸ್ ಠಾಣೆಗೂ, ನಗರ ಪಂಚಾಯತಿಗೂ ವಿಷಯ ತಿಳಿಸಲಾಯಿತು. ನಗರ ಪಂಚಾಯತ್ ನವರು ಕಸ ಎಸೆದ ವ್ಯಕ್ತಿಗೆ ದಂಡ ವಿಧಿಸುವುದಾಗಿ ತಿಳಿಸಿದ್ದಾರೆ.