ಎಸ್.ಎಸ್.ಪಿ.ಯು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗಣಿತ ಕಾರ್ಯಾಗಾರ

0

ಶ್ರೀ ಸುಬ್ರಹ್ಮಣೇಶ್ವರ ಪ.ಪೂ ಕಾಲೇಜಿನ 10ನೇ ತರಗತಿ ವಿದ್ಯಾರ್ಥಿಗಳಿಗಳಿಗೆ ಒಂದು ದಿನದ ವಿಶೇಷ ಗಣಿತ ಕಾರ್ಯಾಗಾರ ನಡೆಯಿತು.

ಬೆಂಗಳೂರಿನ ಪ್ರತಿಷ್ಠಿತ ವಿಜಯಾ ಕಾಲೇಜನ ನಿವೃತ್ತ ಪ್ರಾಂಶುಪಾಲರೂ ರಾಜ್ಯ ಸಂಪನ್ಮೂಲ ವ್ಯಕ್ತಿಗಳೂ ಆದ ಶ್ರೀ ಟಿ.ಕೆ.ಪ್ರಸನ್ನ ಮೂರ್ತಿ ಅವರು ಮಕ್ಕಳಿಗೆ ಗಣಿತದ ಕೆಲವು ಕ್ಲಿಷ್ಟ ಪರಿಕಲ್ಲನೆ ಗಳನ್ನು ಅತ್ಯಂತ ಸೊಗಸಾಗಿ PPT ಮೂಲಕ ವಿವರಿಸಿದರು. 10ನೇ ತರಗತಿ ವಿದ್ಯಾರ್ಥಿ ಗಳಿಗೆ ಪರೀಕ್ಷೆಗೆ ತಯಾರಿ ಬಗ್ಗೆ ವಿಶೇಷ ಮಾಹಿತಿ ನೀಡಿದರು. ಮುಖ್ಯಗುರು ಕೆ. ಯಶವಂತ ರೈ ಅವರು ಅಧ್ಯಕ್ಷತೆ ವಹಿಸಿದರು.

ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು. ಶಿಕ್ಷಕರಾದ ರಘುಬಿಜೂರು ಪ್ರಾರ್ಥನೆಗೈದು ಸುರೇಶ್ ಸ್ವಾಗತಿಸಿದರು. ಗಣಿತ ಶಿಕ್ಷಕ ಎಂ.ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.