ಇಂದು ಸಂಜೆ ಬೆಳ್ಳಾರೆಯಲ್ಲಿ ಶಶಿಪ್ರಭಾ ಪರಿಣಯ, ಇಂದ್ರಜಿತು ಕಾಳಗ

0

ಯಕ್ಷಮಿತ್ರರು ಬೆಳ್ಳಾರೆ ಅರ್ಪಿಸುವ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ ಇವರಿಂದ ಮಳೆಗಾಲದ ಮಹೋನ್ನತ ಯಕ್ಷಗಾನ ಬಯಲಾಟ ಶಶಿಪ್ರಭಾ ಪರಿಣಯ, ಇಂದ್ರಜಿತು ಕಾಳಗ ಇಂದು ಸಂಜೆ (ಆ. 25ರಂದು) ಬೆಳ್ಳಾರೆಯ ಜೆ.ಡಿ. ಅಡಿಟೋರಿಯಂನಲ್ಲಿ ಸಂಜೆ ಗಂಟೆ 6-30ರಿಂದ 10-30ರ ವರೆಗೆ ನಡೆಯಲಿದೆ. ಹಿಮ್ಮೇಳದಲ್ಲಿ
ಭಾಗವತರಾಗಿ ಕರುಣಾಕರ ಶೆಟ್ಟಿಗಾರ್‌ ಕಾಶಿಪಟ್ನ ಮತ್ತು ಸುದೀಶ್ ಪಾಣಾಜೆ ಭಾಗವಹಿಸಲಿದ್ದಾರೆ.


ಚೆಂಡೆ-ಮದ್ದಳೆಯಲ್ಲಿ ಶ್ರೀಧರ ಪಡ್ರೆ, ಹಿರಣ್ಮಯ ಹಿರಿಯಡ್ಕ ಮತ್ತು ಶ್ರೀನಿವಾಸ ಸೋಮಯಾಜಿ ಇರುವೈಲು ಭಾಗವಹಿಸಲಿದ್ದಾರೆ. ವಿಶೇಷ ಆಕರ್ಷಣೆಯಾಗಿ ಅತಿಥಿ ಕಲಾವಿದರಾಗಿ ರವಿಚಂದ್ರ ಕನ್ನಡಿಕಟ್ಟೆ, ಹೇಮಸ್ವಾತಿ ಕುರಿಯಾಜೆ ಹಾಗೂ ದಿನೇಶ್ ರೈ ಕಡಬ ಭಾಗವಹಿಸಲಿದ್ದಾರೆ. ಕಲಾವಿದರಾಗಿ ಹರಿನಾರಾಯಣ ಭಟ್ ಎಡನೀರು, ಕುಂಬ್ಳೆ ಶ್ರೀಧರ ರಾವ್, ಅಮ್ಮುಂಜೆ ಮೋಹನಕುಮಾರ್‌, ಮುರಳೀಧರ ಕನ್ನಡಿಕಟ್ಟೆ, ರಾಜೇಶ್ ನಿಟ್ಟೆ, ಬಾಲಕೃಷ್ಣ ಮಣಿಯಾಣಿ ಮವ್ವಾರು, ಗಣೇಶ್ ಚಂದ್ರಮಂಡಲ, ಗಂಗಾಧರ ಪುತ್ತೂರು, ನವೀನ್ ಮುಂಡಾಜೆ, ಪದ್ಮನಾಭ ಶೆಟ್ಟಿ ಕನ್ನಡಿಕಟ್ಟೆ, ಹರಿಶ್ಚಂದ್ರ ಆಚಾರ್ಯ, ವಾಸುದೇವ ರೈ ಬೆಳ್ಳಾರೆ, ಗೌತಮ್ ಶೆಟ್ಟಿ ಬೆಳ್ಳಾರೆ, ಅಕ್ಷಯ್ ಮಿಜಾರು, ಕಿರಣ್ ಕೊಂಚಾಡಿ ಭಾಗವಹಿಸಲಿದ್ದಾರೆ.

ಪ್ರವೇಶ ಉಚಿತವಾಗಿದ್ದು, ಸಮಯಕ್ಕೆ ಸರಿಯಾಗಿ ಆರಂಭಗೊಳ್ಳಲಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ವಾಸುದೇವ ರೈ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.