ಪಕೀರ ಬೆಳ್ಚಪ್ಪಾಡ ದೇವಸ್ಯ ಮುಪ್ಪೇರ್ಯ ನಿಧನ

0

ಮುಪ್ಪೇರ್ಯ ಗ್ರಾಮದ ದೇವಸ್ಯ ಪಕೀರ ಬೆಳ್ಚಪ್ಪಾಡರು ಆ. 24ರಂದು ನಿಧನರಾದರು. ಇವರಿಗೆ 90 ವರ್ಷ ವಯಸ್ಸಾಗಿತ್ತು.
ಕೇನ್ಯ ಮತ್ತು ಕಲ್ಲಪಣೆಯ ಶ್ರೀ ಮಹಾವಿಷ್ಣುಮೂರ್ತಿ ದೈವದ ಮೇಲೇರಿ ನಿರ್ಮಾಣ, ಕಲಶ ಸೇವಾ ಕರ್ತರಾಗಿ ಸುಮಾರು 40 ವರ್ಷಗಳಿಂದಲೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಪಕೀರ ಬೆಳ್ಚಪ್ಪಾಡರು ಪತ್ನಿ ಶ್ರೀಮತಿ ದೇವಕಿ, ಪುತ್ರರಾದ ಬಾಲಕೃಷ್ಣ ಬೆಳ್ಚಪ್ಪಾಡ, ಮಂಗಳೂರಿನಲ್ಲಿ ಹೋಟೆಲ್ ನಡೆಸುತ್ತಿರುವ ನಾರಾಯಣ ಬೆಳ್ಚಪ್ಪಾಡ, ಪುರುಷೋತ್ತಮ ಬೆಳ್ಚಪ್ಪಾಡ, ಕರುಣಾಕರ ಬೆಳ್ಚಪ್ಪಾಡ, ಪುತ್ರಿಯರಾದ ಶ್ರೀಮತಿ ವಿಜಯ ಚಂದ್ರಶೇಖರ ಬೆಳ್ಚಪ್ಪಾಡ ಗೂನಡ್ಕ, ಶ್ರೀಮತಿ ಲಲಿತಾ ಸುಂದರ ಬೆಳ್ಚಪ್ಪಾಡ ಬಳ್ಪ, ಶ್ರೀಮತಿ ವಾರಿಜ ಸಂತೋಷ್ ಬಾಳಿಲ, ಶ್ರೀಮತಿ ಪ್ರಮೀಳಾ ರವೀಶ್ ದಬ್ಬಡ್ಕ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.