ಲಂಚ ಸ್ವೀಕರಿಸುತ್ತಿದ್ದ ಸಂದರ್ಭ ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಮ ಕರಣಿಕನಿಗೆ ಜಾಮೀನು

0

10 ದಿನಗಳ ಹಿಂದೆ ಸುಳ್ಯ ಕಂದಾಯ‌ ನಿರೀಕ್ಷಕರ ಕಚೇರಿ ಯಲ್ಲಿ ಲಂಚ ಸ್ವೀಕರಿಸುತ್ತಿದ್ದಾಗ ಅರಂತೋಡು ‌ಗ್ರಾಮ ಕರಣಿಕ‌ ಲೋಕಾಯುಕ್ತ ಬಲೆಗೆ‌ ಬಿದ್ದಿದ್ದು ಆತನಿಗೆ ಜಾಮೀನು ಮಂಜೂರಾಗಿರುವುದಾಗಿ ತಿಳಿದು ಬಂದಿದೆ.

ಹಕ್ಕು ಖುಲಾಸೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಂತೋಡು ಗ್ರಾಮದ ಅಡ್ತಲೆ ಹರಿಪ್ರಸಾದ್ ಎಂಬವರಿಂದ ಗ್ರಾಮ ಕರಣಿಕ ಮಿಯಾ ಸಾಬ್ ಮುಲ್ಲಾ ಲಂಚ ಸ್ವೀಕರಿಸಿದ್ದರು.
ಈ‌ಮಾಹಿತಿ ಪಡೆದ ಲೋಕಾಯುಕ್ತ ಅಧಿಕಾರಿಗಳು ಗ್ರಾಮ‌ಕರಣಿಕನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದರು.‌ಇದೀಗ ಆರೋಪಿಗೆ‌ ಜಾಮೀನು ದೊರೆತಿರುವುದಾಗಿ ತಿಳಿದುಬಂದಿದೆ.