ಹಳೆಗೇಟು: ನಾಯಿ ಕಡಿತಕ್ಕೋಳಗಾಗಿ ಮದರಸ ವಿದ್ಯಾರ್ಥಿಗೆ ಗಾಯ, ಸುಳ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ

0

ಸುಳ್ಯ ಮೊಗರ್ಪಣೆ ಮದರಸ ವಿದ್ಯಾರ್ಥಿಗೆ ಹಳೆಗೇಟು ಸಮೀಪ ಎಸ್ ಕೆ ಕಾಂಪೌಂಡ್ ಬಳಿ ಸ್ಥಳೀಯ ಮನೆಯ ಸಾಕು ನಾಯಿ ಕಾಲಿಗೆ ಕಚ್ಚಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ವರದಿಯಾಗಿದೆ.

ವಿದ್ಯಾರ್ಥಿ ಬೆಳಗಿನ ಫಲಹಾರ ಸೇವಿಸಲು ಹಳೆಗೇಟಿನಿಂದ ಗುಂಡಿಯಡ್ಕದತ್ತ ಹೋಗುತ್ತಿದ್ದ ಸಂದರ್ಭ ಎಸ್ ಕೆ ಕಾಂಪೌಂಡ್ ಬಳಿ ಇರುವ ಮನೆಯೊಂದರ ಮುಂಭಾಗದಲ್ಲಿದ್ದ ನಾಯಿ ಬಂದು ಕಾಲಿಗೆ ಕಚ್ಚಿರುತ್ತದೆ. ಈ ವೇಳೆ ಬಾಲಕನ ಕಾಲಿನಲ್ಲಿ ರಕ್ತ ಸೋರುತ್ತಿದ್ದು ಇದನ್ನು ಕಂಡ ಸ್ಥಳೀಯ ನಿವಾಸಿ ಲತೀಫ್ ಎಂಬವರು ತಮ್ಮ ಆಟೋ ರಿಕ್ಷಾದಲ್ಲಿ ಸುಳ್ಯ ಸರ್ಕಾರಿ ಆಸ್ಪತ್ರೆಗೆ ತಂದು ಚಿಕಿತ್ಸೆ ನೀಡಿರುವುದಾಗಿ ತಿಳಿದು ಬಂದಿದೆ.

ಇದೇ ಮನೆಯ ನಾಯಿ ಇದಕ್ಕೂ ಮೊದಲು ಹಲವಾರು ಬಾರಿ ಈ ರಸ್ತೆಯಲ್ಲಿ ಬರುವ ಸಾರ್ವಜನಿಕರನ್ನು ಮತ್ತು ಮಕ್ಕಳನ್ನು ಇದೇ ರೀತಿ ಕಚ್ಚಲು ಮುಂದಾಗಿದೆ ಮತ್ತು ಆತಂಕ ಎದುರಾಗಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಆಗ್ರಹಿಸಿದ್ದಾರೆ.