ಸಬ್ ಇನ್ಸ್ಪೆಕ್ಟರ್ ಹುದೇರಿ ಹರಿಯಪ್ಪ ಗೌಡರು ನಿವೃತ್ತಿ

0

ಮುರುಳ್ಯ ಗ್ರಾಮದ ಹುದೇರಿ ಹರಿಯಪ್ಪ ಗೌಡರು ಬೆಂಗಳೂರಿನಲ್ಲಿ ಸಬ್ ಇನ್ಸ್ಪೆಕ್ಟರ್ ಹುದ್ದೆಯಿಂದ ನಿವೃತ್ತಿಗೊಳ್ಳಲಿದ್ದಾರೆ. 1983 ರಲ್ಲಿ ಸೆಂಟ್ರಲ್ ಇಂಡಸ್ಟ್ರಿಯಲ್ ಸಂಸ್ಥೆಗೆ ಸೆಕ್ಯೂರಿಟಿ ಗಾರ್ಡ್ ಉದ್ಯೋಗಿಯಾಗಿ ಸೇವೆ ಸಲ್ಲಿಸಿ, ಕೇಂದ್ರದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಿ,

ಪ್ರಸ್ತುತ ಬೆಂಗಳೂರು ಏರ್ಪೋರ್ಟ್ ನಲ್ಲಿ 2023 ರ ಜುಲೈ 31 ರಂದು ಬೆಂಗಳೂರಿನಲ್ಲಿ ನಿವೃತ್ತಿ ಗೊಳ್ಳಲಿದ್ದಾರೆ. ಹುದೇರಿ ದಿವಂಗತ ಹುಕ್ರಪ್ಪ ಗೌಡ ಮತ್ತು ದೇವಮ್ಮ ದಂಪತಿಗಳ ಪುತ್ರ. ಇವರು ಹೆಚ್. ವಸಂತ ಹುದೇರಿಯವರ ಸಹೋದರರಾಗಿರುತ್ತಾರೆ.