ಜಟ್ಟಿಪಳ್ಳದಲ್ಲಿ ರಕ್ಷಾ ಬಂಧನ ಕಾರ್ಯಕ್ರಮ

0

ಕಪಿಲ ಯುವಕ ಮಂಡಲ ಜಟ್ಟಿಪಳ್ಳ ಇದರ ವತಿಯಿಂದ ರಕ್ಷಾಬಂಧನ ಕಾರ್ಯಕ್ರಮವನ್ನು ಜಟ್ಟಿಪಳ್ಳ ಶ್ರೀ ಚೆನ್ನಕೇಶವ ದೇವರ ವಸಂತ ಕಟ್ಟೆ ಮುಂಭಾಗದಲ್ಲಿ ಆ.30 ರಂದು ನಡೆಸಲಾಯಿತು.


ಕಪಿಲ ಯುವಕ ಮಂಡಲದ ಅಧ್ಯಕ್ಷ ಹರೀಶ್ ಜೆ ಬಿ, ಗೌರವಾಧ್ಯಕ್ಷ ವಿಶುಕುಮಾರ್ ಕಾನತ್ತಿಲ, ಮಾಜಿ ಅಧ್ಯಕ್ಷ ಚೇತನ್ ಜಟ್ಟಿಪಳ್ಳ, ಶ್ರೀರಾಮ ಭಜನಾ ಸೇವಾ ಸಂಘದ ಕೋಶಾಧಿಕಾರಿ ಸಂತೋಷ್ ಶೆಟ್ಟಿ, ಚೈತನ್ಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ್ ಜಟ್ಟಿಪಳ್ಳ ಹಾಗೂ ಕಪಿಲ ಯುವಕ ಮಂಡಲದ ಕಾರ್ಯದರ್ಶಿ ಕವಿನ್ ಕಾನತ್ತಿಲ, ಕೋಶಾಧಿಕಾರಿ ನಿತೀಶ್ ಜಟ್ಟಿಪಳ್ಳ, ಉಪಾಧ್ಯಕ್ಷ ವಿಪಿನ್ ಕರ್ಕೇರ ಹಾಗೂ ಜಟ್ಟಿಪಳ್ಳ ಶಾಖಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಚಿತ್ತಾರ ಬಂಟ್ವಾಳ್ ರವರು ಬೌದ್ಧಿಕ್ ನೀಡಿ ರಕ್ಷಾಬಂಧನದ ಮಹತ್ವ ಹಾಗೂ ಆಚರಣೆಯ ಬಗ್ಗೆ ತಿಳಿಸಿದರು.