ಸಮಾಜ ಕಲ್ಯಾಣ ಇಲಾಖೆಯ ಆರ್ಶಿಯ ಅವರಿಗೆ ಡಾಕ್ಟರೇಟ್

0


ಸುಳ್ಯದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ನಲ್ಲಿ ವಾರ್ಡನ್ ಆಗಿರುವ ಕು. ಆರ್ಶಿಯ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.


“ಕರಾವಳಿ ಕನ್ನಡ ಮುಸ್ಲಿಂ ಕಥನ ಸಾಹಿತ್ಯದಲ್ಲಿ ಸ್ತ್ರೀತ್ವದ ಪ್ರತಿನಿಧೀಕರಣ” ವಿಷಯವಾಗಿ ಸಲ್ಲಿಸಿದ ಮಹಾಪ್ರಬಂಧಕ್ಕೆ ಈ ಡಾಕ್ಟರೇಟ್ ಪದವಿ ದೊರೆತಿದೆ. ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಾಗಪ್ಪ ಗೌಡ ಆರ್.ಇವರು ಆರ್ಶಿಯ ಅವರ ಗೈಡ್ ಆಗಿದ್ದರು.
ಮಂಗಳೂರಿನ ಎಸ್.ಎಂ.ಇಬ್ರಾಹಿಂ ಮತ್ತು ತಾಹಿರಾ ದಂಪತಿಯ ಪುತ್ರಿಯಾದ ಆರ್ಶಿಯ ಕಳೆದಕೆಲವು ವರ್ಷಗಳಿಂದ ಸುಳ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.