ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯದ ಕಚೇರಿಗೆ ಜಗದೀಶ್ ಕುಂಬ್ಳೆ ಭೇಟಿ

0

ನವೆಂಬರ್ ೧೭ ಮತ್ತು ೧೮ ರಂದು ಸುಳ್ಯದಲ್ಲಿ ನಡೆಯುವ ರಾಷ್ಟ್ರೀಯ ಎ ಗ್ರೇಡ್ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ ನಡೆಯಲಿರುವ ಸ್ಥಳಕ್ಕೆ ಮಾಜಿ ಕಬಡ್ಡಿ ಆಟಗಾರ ತೆಲುಗು ಟೈಟಸನ್ಸ್ ತಂಡ ಕೋಚ್ ಜಗದೀಶ್ ಕುಂಬ್ಳೆ ಭೇಟಿ ನೀಡಿ ಪಂದ್ಯಾಟದ ಪೂರ್ವಭಾವಿ ತಯಾರಿ ಬಗ್ಗೆ ಮಾಹಿತಿ ಪಡೆದು ಆಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ತಮ್ಮ ಸಲಹೆಗಳನ್ನು ನೀಡಿದರು.


ಪಂದ್ಯಾಟಕ್ಕೆ ತಮ್ಮ ಪೂರ್ತಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಘದ ಕೋಶಾಧಿಕಾರಿ ಜಿ ಎ ಮೊಹಮ್ಮದ್ ಸಂಘದ ಪದಾಧಿಕಾರಿಗಳಾದ ಜಿ ಜಿ ನಾಯಕ್, ಶಾಫಿ ಪ್ರಗತಿ, ಮಧುಸೂಧನ್ ನಾಯರ್, ರಕ್ಷಿತ್, ಶ್ರೀಧರ, ಗುರುದತ್ ನಾಯಕ್ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.