ದಿ. ಚಂದ್ರಶೇಖರ ಗುಡ್ಡೆ ಮನೆಯವರಿಗೆ ಸಾರ್ವಜನಿಕ ನುಡಿನಮನ

0

ಉಳ್ಳಾಕುಲು ದೈವದ ಪೂಜಾರಿಗಳಾಗಿ, ಯಕ್ಷಗಾನ-ನಾಟಕದ ಕಲಾವಿದರಾಗಿ ಕುಟುಂಬ-ದೈವ-ಅಷ್ಟಮಂಗಲಪ್ರಶ್ನೆ ಚಿಂತನೆಗಳ ಸಮನ್ವಯಕರಾಗಿ, ಸಲಹೆ ಗಾರರಾಗಿ, ಮಾಜಿ ಮಂಡಲ ಪಂಚಾಯತ್ ಸದಸ್ಯರಾಗಿದ್ದ ಮಡಪ್ಪಾಡಿ ಗ್ರಾಮದ ದಿ||ಚಂದ್ರಶೇಖರ ಗುಡ್ಡೆ ಮನೆ ಯವರು ಸೆ.೭ ರಂದು ನಿಧನದ ಹಿನ್ನೆಲೆ ಯಲ್ಲಿ ಸೆ.೨೬ ರಂದು ಮಡಪ್ಪಾಡಿಯ ಯವಕ ಮಂಡಲದ ಸಭಾಭವನದಲ್ಲಿ ಸಾರ್ವಜನಿಕ ನುಡಿ ನಮನ ಕಾರ್‍ಯಕ್ರಮವನ್ನು ಅಯೋಜಿಸಲಾಯಿತು.
ಮಡಪ್ಪಾಡಿ ಸಿ.ಎ. ಬ್ಯಾಂಕ್‌ನ ಅದ್ಯಕ್ಷರಾದ ಪಿ.ಸಿ ಜಯರಾಮರವರು ಮಾತನಾಡಿ ಗುಡ್ಡೆಮನೆಯವರು ಬಾಲ್ಯದಿಂದಲೇ ಕಷ್ಪದ ಜೀವನದಲ್ಲಿ ಬೆಳೆದುಬಂದರೂ ಸಾರ್ವಜನಿಕರಿಗಾಗಿ ಬೇರೆ ಬೇರೆ ಕ್ಷೇತ್ರದಲ್ಲಿ ಒಂದು ಶಕ್ತಿಯಾಗಿ ಜೀವನ ನಡೆಸಿದ್ದರು ಅವರ ಅಗಲುವಿಕೆ ಅತ್ಯಂತ ನಷ್ಟನ್ನಂಟು ಮಾಡಿದೆ ಎಂದರು.
ಬಳಿಕ ಕಡ್ಯಬಾಳಿಕಳ ಶಿರಾಡಿ ರಾಜನ್ ದೈವಸ್ಥಾನದ ಆಡಳಿತ ಮ್ತೊಕೇಸರಾದ ಡಾ|| ನಂದಕುಮಾರ್ ರವರು, ಮಡಪ್ಪಾಡಿ ಶ್ರೀ ಉಳ್ಳಾಕಲು ಮತ್ತು ಪರಿವಾರ ದೈವಗಳ ದೈವಸ್ಥಾನದ ಆಡಳಿತ ಮಂಡಳಿಯ ಅದ್ಯಕ್ಷರಾದ ದಿನೇಶ್ ಮಡಪ್ಪಾಡಿ, ಗುಡ್ಡೆಮನೆಯವರ ನಿಕಟವರ್ತಿ ಮಾಜಿ ಜಿ.ಪ ಸದಸ್ಯರಾದ ಭರತ್ ಮಂಡೋಡಿ ಯವರು ಚಂದ್ರಶೇಖರವರ ಬದುಕಿನ ವಿವಿಧ ಕಾರ್‍ಯ ಚಟುವಟಿಕೆಗಳ ಬಗ್ಗೆ ಮಾತನಾಡಿ ನುಡಿ ನಮನ ಸಲ್ಲಿಸಿದರು, ಬಳಿಕ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮಡಪ್ಪಾಡಿ ಪ್ರಾಥಾಮಿಕ ಸೇವಾಸಹಕಾರಿ ಸಂಘದ ನಿರ್ದೇಶಕ ಸೋಮಶೇಖರ ಕೇವಳ ನಿರೂಪಿಸಿದರು.