ನ.3 ರಿಂದ 10 ರವರೆಗೆ ಅಜ್ಜಾವರದಲ್ಲಿ ಮದ್ಯವರ್ಜನ ಶಿಬಿರ : ಪೂರ್ವಭಾವಿ ಸಭೆ

0

ಸಮಿತಿ ಅಧ್ಯಕ್ಷರಾಗಿ ಶಿವಪ್ರಕಾಶ್ ಅಡ್ಪಂಗಾಯ ಆಯ್ಕೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್, ತಾಲೂಕು ಜನಜಾಗೃತಿ ವೇದಿಕೆ ಸುಳ್ಯ ಇದರ ವತಿಯಿಂದ ಈ ವರ್ಷದ ಮಧ್ಯವರ್ಜನ ಶಿಬಿರ ಪೂರ್ವ ತಯಾರಿ ಸಭೆ ಮತ್ತು ಸಮಿತಿ ರಚನೆಯ ಸಭೆಯನ್ನು ಸೆ.27 ರಂದು ಅಜ್ಜಾವರ ಶ್ರೀ ಮಹಿಷ ಮರ್ದಿನಿ ದೇವಸ್ಥಾನದಲ್ಲಿ ನಡೆಸಲಾಯಿತು.

ಸಮಿತಿಯ ಅಧ್ಯಕ್ಷರಾಗಿ ಶಿವಪ್ರಕಾಶ್ ಅಡ್ಪಂಗಾಯ ಗುರುಸ್ವಾಮಿಗಳು ಇವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಸಂದರ್ಭ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಲೋಕನಾಥ ಅಮಚೂರ್, ಜನಜಾಗೃತಿ ವೇದಿಕೆಯ ಮಾಜಿ ಜಿಲ್ಲಾಧ್ಯಕ್ಷ ಎನ್.ಎ. ರಾಮಚಂದ್ರ, ಕೇಂದ್ರ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಎ ಭಾಸ್ಕರ್ ಬಯಂಬು, ಪ್ರವೀಣ್ ಕುಮಾರ್ ಜಿಲ್ಲಾ ನಿರ್ದೇಶಕರು, ಗಣೇಶ ಆಚಾರ್ಯ ಉಡುಪಿ ಪ್ರಾದೇಶಿಕ ವಿಭಾಗದ ಯೋಜನಾಧಿಕಾರಿಯವರು, ನಾಗೇಶ್ ಪಿ ಯೋಜನಾಧಿಕಾರಿಗಳು, ಮಹೇಶ್ ರೈ ಮೇನಾಲ, ರಾಜೇಶ್ ರೈ ಮೇನಾಲ, ಭಾಸ್ಕರ್ ನಿವೃತ್ತ ಎ ಎಸ್, ಐ ವೆಂಕಪ್ಪ ಗೌಡ, ಬಾಲಕೃಷ್ಣ ಬೊಳ್ಳೂರು, ಸುಭೋದ ಶೆಟ್ಟಿ ಮೇನಾಲ, ಗುರುರಾಜ್ ಅಡ್ಪಂಗಾಯ, ವಿನುತ ಪಾತಿಕಲ್ಲು, ಸತ್ಯವತಿ ಬಸವನಪಾದೆ, ಪದ್ಮನಾಭ ಜೈನ್, ಉದಯ್ ಆಚಾರ್, ಜಯರಾಮ ಅತ್ಯಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕಿನ ಎಲ್ಲಾ ಜನಜಾಗೃತಿ ವೇದಿಕೆ ವಲಯ ಅಧ್ಯಕ್ಷರುಗಳು, ನಿಕಟ ಪೂರ್ವ ಅಧ್ಯಕ್ಷರುಗಳು, ಅಜ್ಜಾವರ ವಲಯದ ಕಲ್ಲಡ್ಕ ಮಂಡೆಕೋಲು ಪೇರಾಲು, ಅಜ್ಜಾವರ ಮೇನಾಲ ಮುಳ್ಯ ಕಾಂತಮಂಗಲ ದೊಡ್ಡೇರಿ ಒಕ್ಕೂಟದ ಅಧ್ಯಕ್ಷರು ಪದಾಧಿಕಾರಿಗಳು ನವ ಜೀವನ ಸಮಿತಿಯ ಅಧ್ಯಕ್ಷರು, ಸದಸ್ಯರು ಅಜ್ಜಾವರ – ಮಂಡೆಕೋಲು ಗ್ರಾಮ ಪಂಚಾಯತ್ ಸದಸ್ಯರು, ಮಂಡೆಕೋಲು – ಅಜ್ಜಾವರ ಸೊಸೈಟಿ ಅಧ್ಯಕ್ಷರುಗಳು, ಧನಲಕ್ಷ್ಮಿ ಮಹಿಳಾ ಮಂಡಳಿ ಚೈತ್ರ ಯುವತಿ ಮಂಡಳಿ, ಪ್ರತಾಪ ಯುವಕ ಮಂಡಲ, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ, ವನದುರ್ಗ ಭಜನಾ ಮಂಡಳಿ, ಶೌರ್ಯ ಘಟಕದ ಕ್ಯಾಪ್ಟನ್ ಮತ್ತು ಮಾಸ್ಟರ್ ಭಜನಾ ಪರಿಷತ್ ಅಧ್ಯಕ್ಷರು ಪದಾಧಿಕಾರಿಗಳು, ತಾಲೂಕಿನ ಎಲ್ಲಾ ಮೇಲ್ವಿಚಾರಕರು ಅಜ್ಜಾವರ ವಲಯದ ಎಲ್ಲಾ ಸೇವಾ ಪ್ರತಿನಿಧಿಯವರು ಅಜ್ಜಾವರ ಗ್ರಾಮದ ಇತರೆ ಸಂಘ ಸಂಸ್ಥೆಯ ಸದಸ್ಯರುಗಳು, ಸಮಿತಿ ರಚನೆಗೆ ಮಧ್ಯವರ್ಜನ ಶಿಬಿರದ ಪೂರ್ವ ತಯಾರಿಗೆ ಭಾಗವಹಿಸಿದ್ದರು. ವಲಯದ ಮೇಲ್ವಿಚಾರಕರು ವಿಶಾಲ ಕೆ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ವಲಯದ ಮೇಲ್ವಿಚಾರಕರ ಪ್ರಿಯ ಸ್ವಾಗತಿಸಿದರು.

ತಾಲೂಕಿನ ಕೃಷಿ ಅಧಿಕಾರಿಯವರು ರಮೇಶ್ ವಂದನಾರ್ಪಣೆ ಮಾಡಿದರು. ನ.03 ರಿಂದ ನ.10ವರೆಗೆ ಅಜ್ಜಾವರದ ಮಹಿಷ ಮರ್ದಿನಿ ದೇವಸ್ಥಾನದ ಸಭಾಂಗಣದಲ್ಲಿ ಮಧ್ಯವರ್ಜನ ಶಿಬಿರ ನಡೆಯುವುದಾಗಿ ತೀರ್ಮಾನಿಸಲಾಯಿತು.