ಗೂನಡ್ಕ : ಎಂ. ಆರ್. ಡಿ. ಎ. ಆಡಳಿತ ಮಂಡಳಿ ಮಹಾಸಭೆ – ನೂತನ ಪದಾಧಿಕಾರಿಗಳ ಆಯ್ಕೆ

0


ಸಂಪಾಜೆ ಗ್ರಾಮದ ಗೂನಡ್ಕ ಮೊಹಿಯದ್ದೀನ್ ರಿಫಾಯಿ ಧಫ್ ಎಸೋಶಿಯೇಶನ್ ನ ಮಹಾಸಭೆಯು ಸೆ.28ರಂದು ಗೂನಡ್ಕದ ಪೇರಡ್ಕದಲ್ಲಿ ನಡೆಯಿತು.

ಜಮಾಅತ್ ಅದ್ಯಕ್ಷ ಟಿ. ಎಂ. ಶಹೀದ್ ಅವರು ಅಧ್ಯಕ್ಷತೆ ವಹಿಸಿದ್ದರು. ಜಮಾಅತ್ ಖತೀಬರಾದ ರಿಯಾಝ್ ಫೈಝಿ ಅವರು ದುವಾ ನೆರವೇರಿಸಿ,ಮಾತನಾಡಿ ಎಮ್ಮೆಮಾಡು ಸಂಸ್ಥೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುವಂತೆ ಕರೆ ನೀಡಿದರು.


ಈ ಸಂದರ್ಭದಲ್ಲಿ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು. ನೂತನ ಅದ್ಯಕ್ಷರಾಗಿ ಜಿ. ಕೆ. ಹಮೀದ್, ಉಪಾದ್ಯಕ್ಷರಾಗಿ ಎನ್. ಹೆಚ್. ಹ್ಯಾರಿಸ್, ಸಲೀಂ ಅಲ್ತಾಪ್ ಗೂನಡ್ಕ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಕಾರ್ಯದರ್ಶಿಯಾಗಿ ಇರ್ಫಾನ್, ಸಂಘಟನಾ ಕಾರ್ಯದರ್ಶಿಯಾಗಿ ಹನೀಫ್ ಮೊಟ್ಟೆಂಗಾರ್ ಆಯ್ಕೆಯಾದರು.

ನಿರ್ದೇಶಕರುಗಳಾಗಿ ಹಕೀಂ ದರ್ಕಾಸ್, ಅಮೀರುದ್ದೀನ್ ಕೆ ಐ., ಶಾಹಿಲ್ ದರ್ಕಾಸ್, ಸಾದುಮಾನ್ ತೆಕ್ಕಿಲ್ ಆಯ್ಕೆಯಾದರು. ಸಲಹಾ ಸಮಿತಿ ಸದಸ್ಯರಾಗಿ ಟಿ. ಎಂ. ಶಹೀದ್ ತೆಕ್ಕಿಲ್, ರಿಯಾಝ್ ಫೈಝಿ ಉಸ್ತಾದ್, ಎ.ಎ. ರಝಾಕ್ ಹಾಜಿ ಹಾಗೂ ಟಿ. ಕೆ. ರಝಾಕ್ ಹಾಜಿ ಆಯ್ಕೆಗೊಂಡರು. ಪ್ರಧಾನ ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್ ಅವರು ವಂದಿಸಿದರು.